Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದರ್ಶನ್ ಭೇಟಿಯಾದ ರಕ್ಷಿತಾ-ಪ್ರೇಮ್ ಹೇಳಿದ್ದೇನು..?

08:45 PM Jun 29, 2024 IST | suddionenews
Advertisement

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಈ ಪ್ರಕರಣ ಸಂಬಂಧ ಆರಂಭದಲ್ಲಿ ಇಂಡಸ್ಟ್ರಿಯವರು ಯಾರೂ ಕೂಡ ಮಾತನಾಡುತ್ತಿರಲಿಲ್ಲ. ಈಗ ಒಬ್ಬೊಬ್ಬರೇ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ದರ್ಶನ್ ಪರ ಮಾತನಾಡುವುದು, ದರ್ಶನ್ ಪರ ಧ್ವನಿ ಎತ್ತುವುದನ್ನು ಮಾಡುತ್ತಿದ್ದಾರೆ. ಆ ಸಾಲಿಗೆ ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್ ಕೂಡ ಸೇರಿದ್ದಾರೆ.

Advertisement

ನಟಿ ರಕ್ಷಿತಾ ಹಾಗೂ ದರ್ಶನ್ ಜೋಡಿಯಲ್ಲಿ ಬಂದ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಕೂಡ ಇದೆ. ಪ್ರೇಮ್ ಜೊತೆಗೂ ದರ್ಶನ್ ಒಡನಾಟ ಇಟ್ಟುಕೊಂಡಿದ್ದಾರೆ. ಮುಂದೆ ಸಿನಿಮಾ ಮಾಡುವುದಾಗಿಯೂ ಘೋಷಣೆ ಮಾಡಿಕೊಂಡಿದ್ದರು. ಸದ್ಯಕ್ಕೆ ನಿರ್ದೇಶಕ ಪ್ರೇಮ್ ಕೆಡಿ ಸಿನಿಮಾವನ್ನು ಮಾಡುತ್ತಿದ್ದಾರೆ. ಕೆಡಿ ಸಿನಿಮಾದ ಸೆಟ್ ಗೂ ದರ್ಶನ್ ಒಮ್ಮೆ ಭೇಟಿ ನೀಡಿದ್ದರು. ಇದೀಗ ದರ್ಶನ್ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವಾಗ ಪ್ರೇಮ್ ಹಾಗೂ ರಕ್ಷಿತಾ ಜೈಲಿಗೆ ಭೇಟಿ ನೀಡಿ ಬಂದಿದ್ದಾರೆ.

 

Advertisement

ದರ್ಶನ್ ಭೇಟಿ ಬಳಿಕ ಮಾತನಾಡಿದ ನಟಿ ರಕ್ಷಿತಾ, ಹದಿನೈದು ಇಪ್ಪತ್ತು ದಿನದಿಂದ ಆಗಿರುವುದು ದುರದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದರು. ಬಳಿಕ ಮಾತನಾಡಿದ ಪ್ರೇಮ್, ಪ್ರಕರಣ ನ್ಯಾಯಾಲಯದಲ್ಲಿದೆ. ಈ ಸಮಯದಲ್ಲಿ ನಾವೂ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದರು.

ಇನ್ನು ಕೊಲೆಯಾದ ರೇಣುಕಾಸ್ವಾಮಿ ಮದುವೆಯಾಗಿ ಇತ್ತಿಚೆಗಷ್ಟೇ ವರ್ಷ ತುಂಬಿದೆ. ಅಶ್ಲೀಲ ಮೆಸೇಜುಗಳ ಗೀಳಿಗೆ ಬೀಳದೆ ಇದ್ದಿದ್ದರೆ ರೇಣುಕಾಸ್ವಾಮಿ ತನ್ನ ಮುದ್ದಾದ ಹೆಂಡತಿಯೊಂದಿಗೆ ಇಂದು ಸುಖ ಸಂಸಾರ ಮಾಡುತ್ತಿದ್ದ. ಮುಂದೆ ಹುಟ್ಟುವ ಮಗುವಿನ ಮುಖವನ್ನು ನೋಡದಂತೆ ಆಗಿ ಹೋಯ್ತು.

Advertisement
Tags :
actor DarshanbengaluruchitradurgaRakshita-Premsuddionesuddione newsಚಿತ್ರದುರ್ಗದರ್ಶನ್ಪ್ರೇಮ್ಬೆಂಗಳೂರುರಕ್ಷಿತಾಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article