Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಂಸತ್ ಒಳಗೆ ಗದ್ದಲ : ಎಂಟು ಮಂದಿ ಅಮಾ‌ನತು, ಆರೋಪಿಗಳಿಗೆ ಹತ್ತು ವರ್ಷ ಜೈಲು..!

12:57 PM Dec 14, 2023 IST | suddionenews
Advertisement

ನವದೆಹಲಿ: ಸಂಸತ್ ಒಳಗೆ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಇನ್ನು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಎಂಟು ಮಂದಿ ಲೋಕಸಭಾ ಸದಸ್ಯರನ್ನು ಅಮಾನತು ಮಾಡಲಾಗಿದೆ. ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಹಾಗೂ ಲೋಕಸಭಾ ಸೆಕ್ರೇಟರಿಯನ್ನು ಅಮಾನತು ಮಾಡಲಾಗಿದೆ.

Advertisement

ಇನ್ನು ಇದರಲ್ಲಿ ಅರೆಸ್ಟ್ ಆಗಿರುವ ಆರೋಪಿಗಳಿಗೆ ದಂಡದ ಜೊತೆಗೆ ಶಿಕ್ಷೆಯನ್ನು ವಿಧಿಸಲಾಗಿದೆ. ಎಲ್ಲಾ ಆರೋಪಿಗಳ ಮೇಲೆ UAPA ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಈ ಕೇಸ್ ನಲ್ಲಿ ಸುಲಭವಾಗಿ ಜಾಮೀನು ಸಿಗುವುದಿಲ್ಲ. ದಂಡದ ಜೊತೆಗೆ ಸುಮಾರು ಹತ್ತು ವರ್ಷದವರೆಗೂ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

 

Advertisement

ಸಂಸತ್ ಒಳಗೆ ಹೋಗುವುದು ಅಷ್ಟು ಸುಲಭವಲ್ಲ. ಗದ್ದಲ ಎಬ್ಬಿಸಿದ ಆರೋಪಿಗಳಿಗೆ ಸಂಸದರಿಂದ ಪಾಸ್ ಸಿಕ್ಕಿದ್ದೆ ಸುಲಭವಾಗಿ ಒಳಗೆ ಹೋಗುವುದಕ್ಕೆ ಸಾಧ್ಯವಾಗಿತ್ತು. ಆದರೆ ಗದ್ದಲ ಎಬ್ಬಿಸಿದ ಬಳಿಕ ಸಂಸತ್ ನಲ್ಲಿ ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಭದ್ರತೆಗಾಗಿ ಕೇಂದ್ರ ಮೀಸಲು ಪಡೆಯನ್ನು ನೇಮಿಸಲಾಗಿದ್ದು, ಇಂದು ಸಾರ್ವಜನಿಕರಿಗೆ ಪ್ರವೇಶವನ್ನು ರದ್ದು ಮಾಡಲಾಗಿದೆ. ಸಂಸದರಾದರು ಕೂಡ ಪಾಸ್ ತೋರಿಸಿದವರಿಗೆ ಮಾತ್ರ ಒಳಗೆ ಬಿಡಲಾಗುತ್ತಿದೆ. ನಿನ್ನೆ ಘಟನೆಯಿಂದಾಗಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿತ್ತಿದೆ.

Advertisement
Tags :
belagavieight peoplenew DelhiParliamentsuspendedಆರೋಪಿಎಂಟು ಮಂದಿ ಅಮಾ‌ನತುನವದೆಹಲಿಬೆಳಗಾವಿಸಂಸತ್ಹತ್ತು ವರ್ಷ ಜೈಲು
Advertisement
Next Article