Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯ ಗೆ ನಾನೇ ವಿಲನ್ ಎಂದು ಒಪ್ಪಿಕೊಂಡ ಕುಮಾರಸ್ವಾಮಿ..!

05:54 PM Oct 26, 2023 IST | suddionenews
Advertisement

 

Advertisement

 

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ವಿಲನ್ ಆಗದೆ ಸ್ನೇಹಿತನಾಗಲು ಸಾಧ್ಯವೆ ಎಂದು ಹೇಳುವ ಮೂಲನ ಮಾಜಿ ಸಿಎಂ ಕುಮಾರಸ್ವಾಮಿ ನಾನೇ ವಿಲನ್ ಏನಿವಾಗ ಎಂದು ಪ್ರಶ್ನಿಸಿದ್ದಾರೆ.

Advertisement

 

ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೇ ಅವರ ಅಹವಾಲನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಾ ಇದ್ದರು. ಅಂಥವರು ನನ್ನನ್ನು ವಿಲನ್ ಎನ್ನುತ್ತಾರೆ. ಕಾಂಗ್ರೆಸ್ ನಾಯಕರು ನನ್ನನ್ನು ಸಿಎಂ ಎಂಬ ಗೌರವ ಇಲ್ಲದೆ ಪಪೇಟ್ ರೀತಿ ನಡೆಸಿಕೊಳ್ಳುತ್ತಿದ್ದರು. ನನಗೆ ಅಪಮಾನ ಮಾಡಿದರು. ತಾಜ್ ನಲ್ಲಿ ಇದ್ದೆ ಅಂತ ನಂಗೆ ಪದೇ ಪದೇ ಹೇಳ್ತಾರಲ್ಲ, ನಾನು ತಾಜ್ ನಲ್ಲಿ ಮೋಜು ಮಸ್ತಿ ಮಾಡುವುದಕ್ಕೆ ಹೋಗಿರಲಿಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತಾ ಇದ್ದೆ. ನನ್ನ ಬಳಿ ಎಲ್ಲಾ ದಾಖಲೆಗಳು ಇದೆ. ನನ್ನ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅವರೇ. ಅದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

 

ಅಪ್ಪ ನಿಮಗೊಂದು ನಮಸ್ಕಾರ. 14 ತಿಂಗಳು ನನ್ನನ್ನು ಅಧಿಕಾರದಲ್ಲಿ ಇಟ್ಟಿದ್ದಕ್ಕೆ ನಮೋ ನಮಃ.ಜನರ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಎಲ್ಲಾ ಕಡೆಯಲ್ಲೂ ಗ್ಯಾರಂಟಿ ಕೊಡಿತ್ತಿದೆ ಕಾಂಗ್ರೆಸ್. ಈ ಕಾರಣಕ್ಕಾಗಿಯೇ ಎಲ್ಲಾ ಯೋಜನೆಗಳು ಹಳ್ಳ ಹಿಡಿದಿರುವುದು‌. ನಿಮ್ಮ ಗ್ಯಾರಂಟಿಗಳ ಬಗ್ಗೆ ಜನ ಛೀ ಥೂ ಅಂತ ಉಗಿಯೋ ಕಾಲ ಬರುತ್ತೆ ಎಂದು ಗ್ಯಾರಂಟಿಗಳ ಬಗ್ಗೆಯೂ ಕುಮಾರಸ್ವಾಮಿ ಮಾತನಾಡಿದ್ದಾರೆ.

Advertisement
Tags :
admitsbengaluruChief Minister SiddaramaiahfeaturedKumaraswamysuddionevillanಕುಮಾರಸ್ವಾಮಿಬೆಂಗಳೂರುವಿಲನ್ಸಿದ್ದರಾಮಯ್ಯಸುದ್ದಿಒನ್
Advertisement
Next Article