For the best experience, open
https://m.suddione.com
on your mobile browser.
Advertisement

ಸಿಎಂ ಪತ್ನಿ ಪಾರ್ವತಿ ಅವರ ಕೊರಳಿಗೆ ಸುತ್ತಿಕೊಳ್ತು ಇನ್ನೊಂದು ಹಗರಣ..!

03:59 PM Oct 19, 2024 IST | suddionenews
ಸಿಎಂ ಪತ್ನಿ ಪಾರ್ವತಿ ಅವರ ಕೊರಳಿಗೆ ಸುತ್ತಿಕೊಳ್ತು ಇನ್ನೊಂದು ಹಗರಣ
Advertisement

Advertisement

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೂ ಮೂಡಾ ಹಗರಣಕ್ಕೂ ಅದ್ಯಾಕೋ ಸಂಬಂಧವೇ ಕಳೆದುಹೋಗುತ್ತಿಲ್ಲ. ಈಗಾಗಲೇ ಮೂಡಾದಿಂದ ಪಡೆದ ನಿವೇಶನಗಳನ್ನು ವಾಪಾಸ್ ಪಡೆದಿದ್ದಾರೆ. ಆದರೂ ಈಗ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬಾತ ಮತ್ತೊಂದು ಹಗರಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಆ ಜಮೀನನ್ನು ಈಗಾಗಲೇ ಹಿಂತಿರುಗಿಸಿದ್ದಾರೆ.

Advertisement

Advertisement

ಮಾಹಿತಿ ನೀಡಿರುವ ಗಂಗರಾಜು, 20-9-2023ರಲ್ಲಿ ಪಾರ್ವತಿ ಅವರು ಎಸ್ ಎಸ್ ಪಿ ಎಂಟರ್ಪ್ರೈಸ್ ಮಾಲೀಕರಾದ ಗಣೇಶ ಅವರಿಂದ 20 ಗುಂಟೆ ಜಮೀನು ಖರೀದಿ ಮಾಡ್ತಾರೆ. ಈ 20 ಗುಂಟೆ ಜಮೀನು ಇದಕ್ಕೂ ಮುಂಚೆ ಮೂಡಾ ಜಾಗವಾಗಿತ್ತು. ರಸ್ತೆಗಾಗಿಯಿದ್ದಂತ ಜಾಗ. ಪೈಪ್ ಲೈನ್ ಹೋಗಿದೆ ಇಲ್ಲಿಂದ. ಪ್ರಾಧಿಕಾರದಿಂದ ಏಕನಿವೇಶನ ಮಾಡಿರುತ್ತಾರೆ. ಆದರೆ ಅದೇ ಜಾಗವನ್ನು, ಪ್ರಾಧಿಕಾರದ ಆಸ್ತಿಯನ್ನ ಪಾರ್ವತಿ ಅವರ ಹೆಸರಿಗೆ ಬರೆದು ಕೊಡುತ್ತಾರೆ‌.

Advertisement

ಆ ಜಾಗವನ್ನು ಬಿಟ್ಟುಕೊಟ್ಟ ಮೇಲೆ 1 ಕೋಟಿ 85 ಲಕ್ಷಕ್ಕೆ ಪಾರ್ವತಿಯವರು ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಚೆಕ್ ಮುಖಾಂತರ ಹಣ ಹೋಗಿದೆ. ಈ ಮಾಹಿತಿ ನನಗೆ ಗೊತ್ತಾದ ಮೇಲೆ ದಾಖಲೆಗಳನ್ನು ಕ್ರೂಡೀಕರಿಸಲು ಶುರು ಮಾಡಿದೆ. ಅದಾದ ಮೇಲೆ ಇಲ್ಲಿರುವ ಅವರ ಕಡೆಯವರು, ಇಂಥವರು ನಿಮ್ಮ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಲೀಕ್ ಮಾಡುತ್ತಾರೆ. 3-8-2024ರಲ್ಲಿ ಪಾರ್ವತಿ ಅವರು, ಆ ಭೂ ಮಾಲೀಕನನ್ನು ಕರೆದುಕೊಂಡು ಬಂದು ತಿದ್ದುಪಡಿ ಮಾಡಿಕೊಳ್ಳುತ್ತಾರೆ. 21 ಸಾವಿರ ಚದುರಡಿಗೆ ಇದ್ದ ಭೂಮಿಯನ್ನು 13 ಸಾವಿರಕ್ಕೆ ತಿದ್ದುಪಡಿ ಮಾಡಿಕೊಂಡಿದ್ದಾರೆ. ಅದಾದ ಮೇಲೂ ಮತ್ತೆ ವ್ಯತ್ಯಾಸ ಆಗಿದೆ ಎಂಬುದು ಗಮನಕ್ಕೆ ಬರುತ್ತದೆ. ಅದಾದ ಮೇಲೆ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಈಗ ಆ ಆಸ್ತಿಯನ್ನು ಪ್ರಾಧಿಕಾರಕ್ಕೆ ನೀಡಿದ್ದಾರೆ ಎಂದಿದ್ದಾರೆ.

Advertisement
Tags :
Advertisement