Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆಗಸ್ಟ್ 26 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ : ಮುಖಂಡರ ಪೂರ್ವಭಾವಿ ಸಭೆ

05:15 PM Aug 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್,ಚಿತ್ರದುರ್ಗ, ಆಗಸ್ಟ್.21 : ಹೊಳಲ್ಕೆರೆ ರಸ್ತೆಯಲ್ಲಿರುವ ಕೃಷ್ಣಯಾದವಾನಂದ ಮಠದ ಸಮೀಪವಿರುವ ಶ್ರೀಕೃಷ್ಣ ವೃತ್ತದಲ್ಲಿ ಆ.26 ರಂದು ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸುವ ಕುರಿತು ತಾಲ್ಲೂಕು ಗೊಲ್ಲ ಸಮಾಜದಿಂದ ಇತ್ತೀಚೆಗೆ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.

Advertisement

ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ಅಧ್ಯಕ್ಷ ಈರಜ್ಜನಹಟ್ಟಿ ಕೆ.ಕದುರಪ್ಪ ಮಾತನಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.25 ರಂದು ಶ್ರೀಕೃಷ್ಣ ವೃತ್ತದಿಂದ ಬೈಕ್‍ರ್ಯಾಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಆ.26 ರಂದು ಬೆಳಗಿನಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳ ನಡೆಯಲಿದ್ದು, ಸಮಸ್ತ ಗೊಲ್ಲ ಜನಾಂಗದವರು ಹಾಗೂ ಸಹೋದರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಗೊಲ್ಲ ಸಮಾಜದ ಮುಖಂಡ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ ಜನಾಂಗದ ಅನೇಕ ಮುಖಂಡರುಗಳು ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿ ಇವರುಗಳು ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಭಾಗವಹಿಸಲಿದ್ದಾರೆ. ಇದು ಕೇವಲ ಗೊಲ್ಲ ಜನಾಂಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ಜಾತಿ ಧರ್ಮದವರು ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ಜಿಲ್ಲಾ ಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್, ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷ ಆರ್.ಶಿವಣ್ಣ, ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯ ಟಿ.ಜಗದೀಶ್, ಗರಡಿ ತಿಮ್ಮಣ್ಣ, ನಗರಸಭೆ ಮಾಜಿ ಸದಸ್ಯ ಡಿ.ಸುರೇಶ್, ಸಂಪತ್‍ಕುಮಾರ್, ಗೌಡಪ್ಪ, ನಿಂಗೇಶ್, ಮಹಾಂತೇಶ್, ಅವಳೇಶ್, ಅವಳಿಹಟ್ಟಿ ಬಂಗಿ ಜಗ್ಗಣ್ಣ, ಗೋವಿಂದಪ್ಪ, ಜಿ.ಪಿ.ಕೆ.ಜನಾರ್ಧನ್, ಮಹಲಿಂಗಪ್ಪ, ವಿರುಪಾಕ್ಷಪ್ಪ ಯಾದವ್, ಹರೀಶ್, ಮಂಜುನಾಥ, ಲೋಕೇಶ್, ಮಂಜುನಾಥ, ತಿಮ್ಮರಾಯಪ್ಪ, ಮೈಲಾರಪ್ಪ, ಸಂತೋಷ್‍ಕುಮಾರ್, ಕೃಷ್ಣ ವೃತ್ತ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಗೊಲ್ಲ ಸಮಾಜದ ಅನೇಕ ಮುಖಂಡರುಗಳು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Tags :
bengaluruchitradurgaPreliminary meeting of leadersSri krishna Janmashtamisuddionesuddione newsಚಿತ್ರದುರ್ಗಬೆಂಗಳೂರುಮುಖಂಡರ ಪೂರ್ವಭಾವಿ ಸಭೆಶ್ರೀ ಕೃಷ್ಣ ಜನ್ಮಾಷ್ಠಮಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article