For the best experience, open
https://m.suddione.com
on your mobile browser.
Advertisement

ಬಿಜೆಪಿಯ ಮೈಸೂರು ಚಲೋ ಪಾದಯಾತ್ರೆ | ಚಿತ್ರದುರ್ಗದಿಂದ ಹೊರಟ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರ ಅಭಿಮಾನಿಗಳು

05:38 PM Aug 07, 2024 IST | suddionenews
ಬಿಜೆಪಿಯ ಮೈಸೂರು ಚಲೋ ಪಾದಯಾತ್ರೆ   ಚಿತ್ರದುರ್ಗದಿಂದ ಹೊರಟ ಹೊಳಲ್ಕೆರೆ ಶಾಸಕ ಡಾ ಎಂ ಚಂದ್ರಪ್ಪನವರ ಅಭಿಮಾನಿಗಳು
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.07  : ಮುಡಾ ಹಗರಣದಲ್ಲಿ ಸಿಲುಕಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಲೆ ದಂಡಕ್ಕೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆಗೆ ಜಿಲ್ಲೆಯ ಏಕೈಕ ಬಿಜೆಪಿ. ಶಾಸಕ ಹೊಳಲ್ಕೆರೆ ಕ್ಷೇತ್ರದ ಡಾ.ಎಂ.ಚಂದ್ರಪ್ಪನವರ ಅಪಾರ ಅಭಿಮಾನಿಗಳು ಹಾಗೂ ಬಿಜೆಪಿ‌ಕಾರ್ಯಕರ್ತರು ಬಿಜೆಪಿ ಯುವ ಮುಖಂಡ ಎಂ.ಸಿ.ರಘುಚಂದನ್ ನೇತೃತ್ವದಲ್ಲಿ ಬುಧವಾರ ತೆರಳಿದರು.

Advertisement

ಚಳ್ಳಕೆರೆ ಟೋಲ್‌ಗೇಟ್ ಸಮೀಪವಿರುವ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಆವರಣದಿಂದ ಇನ್ನೂರ ಇಪ್ಪತ್ತಕ್ಕೂ ಹೆಚ್ಚು ಕಾರು, ಮೂವತ್ತು ಬಸ್‌ಗಳಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೈಸೂರು ಚಲೋ ಪಾದಯಾತ್ರೆಗೆ ಹೊರಟರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಹಾಗೂ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆಗೆ ಬಿಜೆಪಿ ಜೆಡಿಎಸ್ ಪಕ್ಷಗಳು ಪಟ್ಟು ಹಿಡಿದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ಕೈಬಲಪಡಿಸಿ ಪಾದಯಾತ್ರೆಗೆ ಶಕ್ತಿ ತುಂಬಬೇಕಿದೆ ಎಂದರು.

ಹೊಳಲ್ಕೆರೆ ಮಂಡಲ ಬಿಜೆಪಿ. ಅಧ್ಯಕ್ಷ ಸಿದ್ದೇಶ್, ನಾರದಮುನಿ ವಸಂತ್, ಚಿತ್ರಹಳ್ಳಿ ದೇವರಾಜ್, ಲವಕುಮಾರ್, ರಾಮಗಿರಿ ಕುಮಾರಣ್ಣ, ಡಿ.ಸಿ.ಮೋಹನ್, ಚಿಕ್ಕಬೆನ್ನೂರು ರಾಜಣ್ಣ, ಚಿಕ್ಕಂದವಾಡಿ ಆನಂದ್, ದಾಸನಯ್ಯನಹಟ್ಟಿ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅಂಕಳಪ್ಪ, ಸಿರಿಗೆರೆ ಮೋಹನ್, ಬಸವರಾಜು, ರೂಪ, ಸರಸ್ವತಿ, ಹಂಪನೂರು ರಂಗೇಗೌಡ, ಬಿಜೆಪಿ.ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು, ವಕ್ತಾರ ನಾಗರಾಜ್‌ಬೇದ್ರೆ ಈ ಸಂದರ್ಭದಲ್ಲಿದ್ದರು.

Tags :
Advertisement