ತುಮಕೂರಿನಲ್ಲಿ ಕ್ಷಣ ಮಾತ್ರದಲ್ಲೇ ತಪ್ಪಿದೆ ಭಾರೀ ಅನಾಹುತ..!
12:54 PM Nov 17, 2021 IST
|
suddionenews
Tags :
Advertisement
ತುಮಕೂರು: ಬೃಹತ್ ಬಂಡೆ ಧರೆಗುರುಳಿದ್ದು, ಕ್ಷಣ ಮಾತ್ರದಲ್ಲೇ ಭಾರೀ ಅನಾಹುತವಾಗುತ್ತಿದ್ದಂತ ಘಟನೆಯೊಂದು ತಪ್ಪಿದೆ. ಮಳೆಯಿಂದಾಗಿ ಈ ಅನಾಹುತ ನಡೆದಿದೆ.
Advertisement
ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಬಂಡೆಯೊಂದು ರಸ್ತೆಗೆ ಉರುಳಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಬೆಟ್ಟದಿಂದ ಮಣ್ಣು ಕುಸಿದಿದೆ. ಮಣ್ಣು ಕುಸಿದ ಪರಿಣಾಮ ಬಂಡೆ ರಸ್ತೆಗೆ ಉರುಳಿದೆ. ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರೋ ಬೆಟ್ಟದಿಂದ ಈ ಅವಾಂತರ ನಡೆದಿದೆ.
ಮುಖ್ಯ ರಸ್ತೆಯಾಗಿದ್ದ ಕಾರಣ ಆ ರಸ್ತೆಯಲ್ಲಿ ನೂರಾರು ಜನ ಓಡಾಡ ನಡೆಸುತ್ತಿದ್ದರು. ವಾಹನ ಸವಾರರು ಓಡಾಡುತ್ತಿದ್ದ ವೇಳೆಯೇ ಇಂಥ ದುರ್ಘಟನೆ ಸಂಭವಿಸಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಸ್ಥಳಕ್ಕೆ ಮಧುಗಿರಿ ಎಸಿ ಸೋಮಪ್ಪ ಕಡಕೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
Advertisement
Next Article