For the best experience, open
https://m.suddione.com
on your mobile browser.
Advertisement

ತುಮಕೂರಿನಲ್ಲಿ ಕ್ಷಣ ಮಾತ್ರದಲ್ಲೇ ತಪ್ಪಿದೆ ಭಾರೀ ಅನಾಹುತ..!

12:54 PM Nov 17, 2021 IST | suddionenews
ತುಮಕೂರಿನಲ್ಲಿ ಕ್ಷಣ ಮಾತ್ರದಲ್ಲೇ ತಪ್ಪಿದೆ ಭಾರೀ ಅನಾಹುತ
Advertisement

ತುಮಕೂರು: ಬೃಹತ್ ಬಂಡೆ ಧರೆಗುರುಳಿದ್ದು, ಕ್ಷಣ ಮಾತ್ರದಲ್ಲೇ ಭಾರೀ ಅನಾಹುತವಾಗುತ್ತಿದ್ದಂತ ಘಟನೆಯೊಂದು ತಪ್ಪಿದೆ. ಮಳೆಯಿಂದಾಗಿ ಈ ಅನಾಹುತ ನಡೆದಿದೆ.

Advertisement
Advertisement

ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಬಂಡೆಯೊಂದು ರಸ್ತೆಗೆ ಉರುಳಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಬೆಟ್ಟದಿಂದ ಮಣ್ಣು ಕುಸಿದಿದೆ. ಮಣ್ಣು ಕುಸಿದ ಪರಿಣಾಮ ಬಂಡೆ ರಸ್ತೆಗೆ ಉರುಳಿದೆ. ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರೋ ಬೆಟ್ಟದಿಂದ ಈ ಅವಾಂತರ ನಡೆದಿದೆ.

Advertisement

ಮುಖ್ಯ ರಸ್ತೆಯಾಗಿದ್ದ ಕಾರಣ ಆ ರಸ್ತೆಯಲ್ಲಿ ನೂರಾರು ಜನ ಓಡಾಡ ನಡೆಸುತ್ತಿದ್ದರು. ವಾಹನ ಸವಾರರು ಓಡಾಡುತ್ತಿದ್ದ ವೇಳೆಯೇ ಇಂಥ ದುರ್ಘಟನೆ ಸಂಭವಿಸಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಸ್ಥಳಕ್ಕೆ ಮಧುಗಿರಿ ಎಸಿ ಸೋಮಪ್ಪ ಕಡಕೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Advertisement
Tags :
Advertisement