Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಂತ್ಯಸಂಸ್ಕಾರಕ್ಕೂ ಜಾಗವಿಲ್ಲ : ತುಮಕೂರಿನಲ್ಲಿ ರಸ್ತೆಯಲ್ಲಿಯೇ ಶವವಿಟ್ಟು ಪ್ರತಿಭಟಿಸಿದ ಸಂಬಂಧಿಕರು..!

12:39 PM Jun 07, 2022 IST | suddionenews
Advertisement

ತುಮಕೂರು: ಮೃತವ್ಯಕ್ತಿಯ ಶವಸಂಸ್ಕಾರ ಮಾಡಲು ಜಾಗವಿಲ್ಲದೆ ರಸ್ತೆಯಲ್ಲಿಟ್ಟು ಪ್ರತಿಭಟಿಸಿದ ಘಟನೆ ಜಿಲ್ಲೆಯ ನಾಗೇಗೌಡನ ಪಾಳ್ಯದಲ್ಲಿ ನಡೆದಿದೆ. ಹನುಮಂತಯ್ಯ ಎಂಬ ವ್ಯಕ್ತಿ ಮೃತಪಟ್ಟಿದ್ದು, ಆತನ ಶವವನ್ನು ರಸ್ತೆ ಮಧ್ಯೆ ಇಟ್ಟು ಪ್ರತಿಭಟನಿಸಿದ್ದಾರೆ.

Advertisement

ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಮೃತರ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದಾರೆ. ಮತ್ತೆ ಎಂದು ಈ ರೀತಿಯ ಸಮಸ್ಯೆ ಉದ್ಭವಿಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಅಂತ್ಯಸಂಸ್ಕಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಸಮಸ್ಯೆ ತಿಳಿಗೊಳಿಸಿದ್ದಾರೆ.

ದೇಶದ ಹಲವು ಕಡೆ ಅಂತ್ಯಸಂಸ್ಕಾರಕ್ಕೆ ಜಾಗ ಇಲ್ಲದೆ ಇರುವ ಬಗ್ಗೆ ಸುದ್ದಿಯಾಗುತ್ತಲಿರುತ್ತದೆ. ಕೆಲವೊಂದು ಸಮುದಾಯಕ್ಕೆ ಈ ರೀತಿಯ ಸಮಸ್ಯೆ ಕಾಡುವ ಸುದ್ದಿಯನ್ನು ಕೇಳಿದ್ದೇವೆ. ಅಷ್ಟೇ ಅಲ್ಲ ಹಲವು ರಾಜ್ಯಗಳಲ್ಲಿ ಶವ ಸಾಗಿಸಲು ವ್ಯವಸ್ಥೆ ಇಲ್ಲದಂತ ದುಸ್ಥಿಯನ್ನು ನೋಡಿದ್ದೇವೆ. ಇದೀಗ ನಮ್ಮ ರಾಜ್ಯದಲ್ಲೂ ಅಂತ್ಯಸಂಸ್ಕಾರದ ವಿಚಾರಕ್ಕೆ ಪ್ರತಿಭಟನೆ ನಡೆದಿದೆ.

Advertisement

Advertisement
Tags :
featuredfuneralsno‌ spaceProtestrelativessuddionetumakuruಅಂತ್ಯಸಂಸ್ಕಾರಜಾಗವಿಲ್ಲತುಮಕೂರುಪ್ರತಿಭಟನೆರಸ್ತೆಶವಸಂಬಂಧಿಕರುಸುದ್ದಿಒನ್
Advertisement
Next Article