For the best experience, open
https://m.suddione.com
on your mobile browser.
Advertisement

ನೀರಾವರಿ ಸಚಿವ ಮಾಧುಸ್ವಾಮಿ ಮತ್ತೊಮ್ಮೆ ಕಣ್ಣೀರು..!

03:18 PM Dec 31, 2021 IST | suddionenews
ನೀರಾವರಿ ಸಚಿವ ಮಾಧುಸ್ವಾಮಿ ಮತ್ತೊಮ್ಮೆ ಕಣ್ಣೀರು
Advertisement

ತುಮಕೂರು: ತಮ್ಮೂರಿಗೆ ನೀರಾವರಿ ಯೋಜನೆ ಜಾರಿ ಮಾಡುವ ವಿಚಾರದಲ್ಲಿ ಗೆದ್ದಿರುವ ಸಚಿವ ಮಾಧುಸ್ವಾಮಿ ಆ ವಿಚಾರಕ್ಕೆ ಮತ್ತೆ ಎಮೋಷನಲ್ ಆಗಿದ್ದಾರೆ. ಮಾತನಾಡುವಾಗ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

Advertisement
Advertisement

ಇಂದು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಸಮೀಪ ಇರುವ ತಿಮ್ಲಾಪುರ ಕೆರೆ ತುಂಬಿದ ಹಿನ್ನೆಲೆ ಇಂದು ಗೌರಾರ್ಪಣೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಾಧುಸ್ವಾಮಿ ಕಣ್ಣಲ್ಲು ನೀರು ಬಂದಿದೆ. ನಾನು ಹಠ ಮಾಡಿದ್ದು ತಿಮ್ಲಾಪುರ ಕೆರೆಗೆ ನೀರು ತರುತ್ತೇನೆ ಎಂದು. ಶೆಟ್ಟಿಕೆರೆಗೆ ಅಲ್ಲ. ಯಾಕಂದ್ರೆ ತಿಮ್ಲಾಪುರ ಕೆರೆ ನಂಬಿಕೊಂಡು ಸಾಕಷ್ಟು ಹಿಂದುಳಿದ ವರ್ಗದವರಿದ್ದಾರೆ.

Advertisement

ನಾನು ಈ ಕೆರೆಯ ಬಗ್ಗೆಯಷ್ಟೇ ಮಾತನಾಡುತ್ತಿದ್ದೇನೆ ಎಂದರೆ ಆ ಕೆರೆಯಿಂದ ಎಷ್ಟು ಜನರಿಗೆ ಉಪಯೋಗವಾಗಿದೆ ಎಂದು ಅರ್ಥ. ಎಲ್ಲೆಲ್ಲಿ ಏನು ಮಾಡಬೇಕು..? ಅದರಿಂದಾಗುವ ಅನುಕೂಲವೇನು ಅನ್ನೋದು ಎಲ್ಲಾ ರಾಜಕಾರಣಿಗಳಿಗೂ ಗೊತ್ತಿರಬೇಕು. ಆ ರೀತಿ ಯೋಚಿಸಿದಾಗ ಜಾರಿಗೆ ತರುವ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಖುಷಿಯಿಂದ ತಮ್ಮ ಯೋಜನೆ ಬಗ್ಗೆ ಹೇಳಿದ್ದಾರೆ.

Advertisement
Advertisement

Advertisement
Tags :
Advertisement