Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗುಬ್ಬಿ | ಆಗಸ್ಟ್ 05 ರಂದು ಸರ್ಕಾರದ ವಿರುದ್ಧ ಬಿಎಸ್ಪಿ ವತಿಯಿಂದ ಪ್ರತಿಭಟನೆ

02:53 PM Aug 01, 2024 IST | suddionenews
Advertisement

ಗುಬ್ಬಿ : ಎಸ್ಸಿ ಎಸ್ಟಿ ಹಣ ದುರುಪಯೋಗ ಮಾಡುವ ಮೂಲಕ ಸಮುದಾಯದ ಜನಕ್ಕೆ ವಂಚಿಸಿದ ಸರ್ಕಾರದ ವಿರುದ್ಧ ಅಗಸ್ಟ್ 5 ರಂದು ಪ್ರತಿಭಟನೆಯನ್ನು ಮಾಡಲಾಗುತ್ತಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ತಾಲೂಕು ಅಧ್ಯಕ್ಷ ಕಲ್ಲರದಗೆರೆ ಶಿವಣ್ಣ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ಸಿ ಹಾಗೂ ಎಸ್ ಟಿ ಸಮುದಾಯಕ್ಕೆ ನೀಡಿದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಸರ್ಕಾರದ ವಿರುದ್ಧ ಆಗಸ್ಟ್ 5 ರಂದು ಗುಬ್ಬಿ ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ಮಾಡಿ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮ ಮಂಡಳಿಯ ಸುಮಾರು 187 ಕೋಟಿ ಅಷ್ಟು ಹಣವನ್ನು ಸರಕಾರವು ಅನಗತ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವುದು ತಿಳಿದಿದೆ, ಇನ್ನೂ ಎಸ್ ಸಿ ಸಮುದಾಯಕ್ಕೆ ನೀಡಿದ್ದ 25,500 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗಾಗಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಮಟ್ಟದಲ್ಲಿಯೂ ಸಹ ನಮ್ಮ ಹಿಂದುಳಿದ ಸಮುದಾಯಗಳ ಹಣವನ್ನ ದುರ್ಬಳಕೆ ಮಾಡಿಕೊಂಡಿರುವ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜು ಮಂಚಲದೊರೆ, ದಲಿತ್ ಗಂಗಣ್ಣ, ಮೂರ್ತಿ ಇರಸಂದ್ರ ಭಾಗಿಯಾಗಿದ್ದರು.

Advertisement
Tags :
bengalurubspchitradurgaGovernmentProtestsuddionesuddione newstumakuruಚಿತ್ರದುರ್ಗತುಮಕೂರುಪ್ರತಿಭಟನೆಬಿಎಸ್‍ಪಿಬೆಂಗಳೂರುಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article