Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಲಿತ ಸಿಎಂ ಧ್ವನಿ ಎತ್ತಿದ ಬೆಂಬಲಿಗರು : ನೀವೂ ಇಲ್ಲಿ ಕೂಗಿದ್ರೆ, ಅಲ್ಲಿ ಹೊಡೆತ ಬೀಳುತ್ತೆ ಎಂದ ಪರಮೇಶ್ವರ್..?

04:15 PM Jan 23, 2022 IST | suddionenews
Advertisement

ತುಮಕೂರು: ದಲಿತ ಸಿಎಂ ವಿಚಾರ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಇದೀಗ ಮತ್ತೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಲಿತ ಸಿಎಂ ಆಗ್ಬೇಕು ಅನ್ನೋ ಸದ್ದು ಜೋರಾಗಿ ಕೇಳಿಸಿದೆ.

Advertisement

ಜಿಲ್ಲೆಯ ಕೊರಟಗೆರೆಯ ಚಿಕ್ಕಗುಂಡಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಅವರ ಬೆಂಬಲಿಗರು ಪರಮೇಶ್ಚರ್ ಸಿಎಂ ಆಗುವ ಬಗ್ಗೆ ಕೂಗು ಕೇಳಿ ಬಂದಿದೆ. ತಕ್ಷಣ ಪರಮೇಶ್ವರ್ ಅದಕ್ಕೆ ಸಲಹೆ ನೀಡಿದ್ದಾರೆ.

ನಾನೂ ಸಿಎಂ ಆಗ್ಬೇಕುವಾಂತ ಕೂಗ್ಬೇಡಿ. ಆಮೇಲೆ ಒಳಗೊಳಗೆ ಸಂಚು ಶುರುವಾಗುತ್ತೆ. ಈ ವಿಚಾರ ಎತ್ತಿದ್ರೆ ನನಗೆ ತುಂಬಾ ಕಷ್ಟವಾಗುತ್ತೆ. ನೀವು ಇಲ್ಲಿ ಕೂಗೋಕೆ ಶುರು ಮಾಡಿದ್ರೆ, ನನಗೆ ಅಲ್ಲಿ ಹೊಡೆತ ಬೀಳುತ್ತೆ. ನೀವೂ ಮನಸ್ಸಿನಲ್ಲಿ ಬೇಕಾದ್ರೆ ಹೇಳಿಕೊಳ್ಳಿ.

Advertisement

ನಿಮ್ಮ ಆಶೀರ್ವಾದ ಮತ್ತು ಪರಮಾತ್ಮನ ಆಶೀರ್ವಾದ ಇದ್ದರೆ ಖಂಡಿತ ನಾನು ಮುಖ್ಯಮಂತ್ರಿ ಆಗ್ತೇನೆ. ಅಷ್ಟೇ ಅಲ್ಲ‌ ಮುಖ್ಯಮಂತ್ರಿ ಸ್ಥಾನವನ್ನ ಯಾರಿಗೆ ನೀಡ್ಬೇಕು ಅನ್ನೋದು ವರಿಷ್ಠರಿಗೆ ತಿಳಿದಿದೆ ಎಂದಿದ್ದಾರೆ. ಆದರೂ ಬೆಂಬಲಿಗರಿಗೆ ಬುದ್ಧಿ ಹೇಳುವ ಮೂಲಕ ಸಿಎಂ ಆಗುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ.

Advertisement
Tags :
chantingdalith cmDr.G parameshwarfeaturedfollowerssuddionetumakuruತುಮಕೂರುದಲಿತ ಸಿಎಂಧ್ವನಿಪರಮೇಶ್ವರ್ಬೆಂಬಲಿಗರುಸುದ್ದಿಒನ್
Advertisement
Next Article