For the best experience, open
https://m.suddione.com
on your mobile browser.
Advertisement

ರಾಜಕಾರಣ ಬೇಕೋ.. ಬೇಡ್ವೋ ಎಂಬ ಗೊಂದಲದ ಮಾತುಗಳನ್ನಾಡಿದ ಡಿಕೆ ಸುರೇಶ್

03:42 PM Jun 08, 2023 IST | suddionenews
ರಾಜಕಾರಣ ಬೇಕೋ   ಬೇಡ್ವೋ ಎಂಬ ಗೊಂದಲದ ಮಾತುಗಳನ್ನಾಡಿದ ಡಿಕೆ ಸುರೇಶ್
Advertisement

Advertisement
Advertisement

ತುಮಕೂರು: ಸದ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಡಿಕೆ ಶಿವಕುಮಾರ್ ಈ ಬಾರಿ ಸಿಎಂ ಆಗಬೇಕು ಅಂತ ಸಾಕಷ್ಟು ಪರಿಶ್ರಮ ಹಾಕಿದರು ಅದು ಸಾಧ್ಯವಾಗಲಿಲ್ಲ. ಸದ್ಯ ಡಿಸಿಎಂ ಜೊತೆಗೆ ಮಹತ್ವದ ಖಾತೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಅದ್ಯಾಕೋ ಇದೀಗ ಡಿಸಿಎಂ ಡಿಕೆ ಸುರೇಶ್ ಅವರು ರಾಜಕೀಯದ ಬಗ್ಗೆ ವೈರಾಗ್ಯ ಬಂದವರಂತೆ ಹೇಳಿಕೆ‌ ನೀಡಿದ್ದಾರೆ.

Advertisement

ಕುಣಿಗಲ್ ತಾಲೂಕಿನ ಗಿರಿಗೌಡ ಪಾಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು ನನಗೆ ರಾಜಕಾರಣ ಬೇಕೋ ಬೇಡ್ವೋ ಎನಿಸಿದೆ. ನಾನೂ ಇನ್ನೂ ಗೊಂದಲದಲ್ಲಿದ್ದೀನಿ. ನನದನ ಗುರಿ ಇರುವುದು ನಿಮ್ಮಗಳ ಸೇವೆ ಮಾಡುವುದರಲ್ಲಿ. ನಾನು ಎಲ್ಲರ ಸಲಹೆಯನ್ನು ಪಡೆದುಕೊಂಡು ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

Advertisement
Advertisement

ಸದ್ಯ ವಿಧಾನಸಭಾ ಚುನಾವಣೆ ಮುಗಿದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಸ್ಪರ್ಧಿಸುತ್ತಾರೆ ಎಂಬ ಮಾತಿಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಅವರದ್ದೇ ಸರ್ಕಾರವಿದೆ. ಅದರಲ್ಲೂ ಅವರ ಸಹೋದರ ಡಿಸಿಎಂ ಆಗಿದ್ದರು ಈ ರೀತಿಯ ಹೇಳಿಕೆ ನೀಡಿದ್ದು ಶಾಕ್ ಆಗಿದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿಕೊಳ್ಳಲಾಗಿದೆ.

Advertisement
Tags :
Advertisement