For the best experience, open
https://m.suddione.com
on your mobile browser.
Advertisement

ರಣಜಿ ಆಟಗಾರ ಅರ್ಜುನ್ ಹೊಯ್ಸಳ, ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ಸ್ಪೆಷಲ್ ಎನಿಸುವ ಫೋಟೋಗಳು ಇಲ್ಲಿವೆ

03:09 PM Sep 12, 2022 IST | suddionenews
ರಣಜಿ ಆಟಗಾರ ಅರ್ಜುನ್ ಹೊಯ್ಸಳ  ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ಸ್ಪೆಷಲ್ ಎನಿಸುವ ಫೋಟೋಗಳು ಇಲ್ಲಿವೆ
Advertisement

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ವೇದಾ ಕೃಷ್ಣಮೂರ್ತಿ ಜೀವನದ ಹೊಸ ಹಂತಕ್ಕೆ ಕಾಲಿಡಲಿದ್ದಾರೆ. ಅವರ ನಿಶ್ಚಿತಾರ್ಥ ಸಮಾರಂಭ ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.

Advertisement
Advertisement

Advertisement

ವೇದಾ ಕೃಷ್ಣಮೂರ್ತಿ ಅವರು ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅರ್ಜುನ್ ಮತ್ತು ವೇದಾ ಇಬ್ಬರೂ ತಮ್ಮ ವಿಶೇಷ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರಿಬ್ಬರ ಚಿತ್ರಗಳು ವೈರಲ್ ಆಗಿವೆ.

Advertisement
Advertisement

ಕೋವಿಡ್ -19 ಗೆ ತನ್ನ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ನಂತರ ವೇದಾ ಕೃಷ್ಣಮೂರ್ತಿ ದುಃಖದಲ್ಲಿಯೇ ಇದ್ದರು. ಪ್ರಸ್ತುತ ಅವರು ಭಾರತೀಯ ತಂಡದಲ್ಲಿಲ್ಲ ಮತ್ತು ತಂಡಕ್ಕೆ ಮರಳಲು ತಮ್ಮ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

ಅರ್ಜುನ್ ಅವರು ವೇದಾ ಕೃಷ್ಣಮೂರ್ತಿ ಅವರ ಮುಂದೆ ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಇಬ್ಬರು ಕರ್ನಾಟಕದ ಸುಂದರವಾದ ಸ್ಥಳದಲ್ಲಿ ಅವರ ಫೋಟೋಗಳನ್ನು ಶೂಟ್ ಮಾಡಿಸಿದ್ದಾರೆ.

ಎಡಗೈ ಬ್ಯಾಟರ್ ಆಗಿರುವ ಅರ್ಜುನ್, ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿದ್ದಾರೆ. ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ವಿವಿಧ ಫ್ರಾಂಚೈಸಿಗಳಿಗಾಗಿ ಆಡಿದ್ದರು. ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಾಗಿರುವ ಆಲ್ ರೌಂಡರ್ ವೇದಾ ಕೃಷ್ಣಮೂರ್ತಿ ಅವರು 48 ಏಕದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು 2017 ರಲ್ಲಿ ODI ವಿಶ್ವಕಪ್ ಮತ್ತು 2020 ರಲ್ಲಿ T20 ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದರು.

Advertisement
Tags :
Advertisement