For the best experience, open
https://m.suddione.com
on your mobile browser.
Advertisement

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗ್ತಾರಾ..? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

01:53 PM Jan 25, 2024 IST | suddionenews
ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗ್ತಾರಾ    ಸಿಎಂ ಸಿದ್ದರಾಮಯ್ಯ ಹೇಳಿದ್ದೇನು
Advertisement

Advertisement
Advertisement

ಬೆಂಗಳೂರು: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ನಾಯಕರು ಬಿಟ್ಟು ಹೋದವರನ್ನು ಕರೆತರುವ ಪ್ಲ್ಯಾನ್ ಮಾಡುತ್ತಿದ್ದಾರೆ. ಅದರಲ್ಲಿ ಜಗದೀಶ್ ಶೆಟ್ಟರ್ ಮೊದಲಿಗರು. ವರಿಷ್ಠರ ಹೆಗಲಿಗೆ ಶೆಟ್ಟರ್ ಜೊತೆಗಿನ ಮಾತುಕತೆ ನಡೆಸುವ ಜವಬ್ದಾರಿ ಬಿದ್ದಿದೆ. ಅಮಿತ್ ಶಾ ಕೂಡ ಶೆಟ್ಟರ್ ಜೊತೆಗೆ ಮಾತುಕತೆ ನಡೆಸಲು ತಯಾರಿ ನಡೆಸಿದ್ದಾರೆ. ಶೆಟ್ಟರ್ ಜೊತೆಗೆ ಲಕ್ಷ್ಮಣ್ ಸವದಿ ಕೂಡ ವಾಪಾಸ್ ಆಗುವ ಸಾಧ್ಯತೆ ಇದೆ‌. ಬಿಜೆಪಿ ನಾಯಕರು ಈ ಸಂಬಂಧ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ವರಿಷ್ಠರಿಗೆ ಜವಬ್ದಾರಿ ಇದೆ.

Advertisement

Advertisement
Advertisement

ಜಗದೀಶ್ ಶೆಟ್ಟರ್ ಕೂಡ ಹೈಕಮಾಂಡ್ ಮಾತನಾಡಲಿ ಆಮೇಲೆ ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದಿದ್ದರು. ಶೆಟ್ಟರ್ ಅವರು ಈ ಹಿಂದೆ ಕೂಡ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ವಾಪಾಸ್ ಹೋಗಲ್ಲ ಎಂಬ ಮಾತನ್ನು ಹೇಳಿದ್ದರು. ಆದರೆ ಲೋಕಸಭಾ ಚುನಾವಣೆಯ ಬೆನ್ನಲ್ಲೇ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಹೈಕಮಾಂಡ್ ನಾಯಕರೇ ಶೆಟ್ಟರ್ ಅವರನ್ನು ಸಂಪರ್ಕ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯಲ್ಲಿ ನನಗೆ ಬಹಳ ಅವಮಾನವಾಗಿದೆ. ಟಿಕೆಟ್ ಕೊಡದೆ ಅವಮಾನ ಮಾಡಿದ್ದಾರೆ. ಯಾರೂ ಎಷ್ಟೇ ಪ್ರಯತ್ನ ಪಟ್ಟರು ನಾನು ಬಿಜೆಪಿಗೆ ಹೋಗಲ್ಲ ಎಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Advertisement
Tags :
Advertisement