For the best experience, open
https://m.suddione.com
on your mobile browser.
Advertisement

ತಗಡು ಎಂದ ದರ್ಶನ್ ಗೆ ಉಮಾಪತಿ ಹೇಳಿದ್ದೇನು..?

08:28 PM Feb 20, 2024 IST | suddionenews
ತಗಡು ಎಂದ ದರ್ಶನ್ ಗೆ ಉಮಾಪತಿ ಹೇಳಿದ್ದೇನು
Advertisement

ಬೆಂಗಳೂರು: ಕಾಟೇರ ಸಿನಿಮಾ ಒಳ್ಳೆ ಸಕ್ಸಸ್ ಕಂಡಿದೆ. ಒಟಿಟಿಯಲ್ಲಿ ರಿಲೀಸ್ ಆದ್ರೂ ಕೂಡ ಥಿಯೇಟರ್ ನಲ್ಲಿ ಓಡುತ್ತಲೇ ಇದೆ. ಇಂದಿಗೆ ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದಿವೆ. ಪ್ರಸ್ತುತ ದಿನಗಳಲ್ಲಿ‌ ಒಂದು ಸಿನಿಮಾ ಐವತ್ತು ದಿನ ಪೂರೈಸುವುದು ಎಂದರೆ ಸುಲಭದ ಮಾತಲ್ಲ. ಆ ಸಂಭ್ರಮವನ್ನು ಇಡೀ ತಂಡ ಇಂದು ಆಚರಣೆ ಮಾಡಿದೆ.

Advertisement

ಐವತ್ತು ದಿನದ ಸಂಭ್ರಮದಲ್ಲಿ ದರ್ಶನ್ ಮಾತನಾಡಿದ್ದು, ಸಿನಿಮಾದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ರಾಬರ್ಟ್ ವಿಚಾರ ಕೂಡ ಬಂದಿದೆ. ಹುಟ್ಟುಹಬ್ಬದ ದಿನ ಸಿಂಧೂರ ಲಕ್ಷ್ಮಣ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈ ಟೈಟಲ್ ಈ ಹಿಂದೆ ನಿರ್ಮಾಪಕ ಉಮಾಪತಿ ಅವರ ಬಳಿ ಇತ್ತು. ಇದೀಗ ಸಿ‌ನಿಮಾ ಅನೌನ್ಸ್ ಆಗಿದ್ದು, ಟೈಟಲ್ ಬಗ್ಗೆ ಮಾತನಾಡುವಾಗ ರಾಬರ್ಟ್ ವಿಚಾರವೂ ಬಂದಿದೆ. ನಾವೇ ಕಥೆ ಕೊಟ್ಟಿದ್ದು. ಯಾರೀ ತಗಡು ಎಂದಿದ್ದಾರೆ.

Advertisement

ಈ ವಿಚಾರಕ್ಕೆ ಇದೀಗ ಉಮಾಪತಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ದರ್ಶನ್​ ಅವರು ನನಗೆ ಮಾತಾಡಿದ್ರು ಎಂದು ಬೇಜಾರೇನಿಲ್ಲ. ಸಮಯ ಸಂದರ್ಭ ಹಾಗೇ ಮಾತಾಡಿಸಿರಬೇಕು. ಪದಗಳನ್ನು ಬಳಸಬೇಕಾದ್ರೆ ಚೂರು ಎಚ್ಚರಿಕೆಯಿಂದ ಇರಬೇಕು. ನಾನು ದರ್ಶನ್​ ಅವರ ಬೆಳವಣಿಗೆಯನ್ನೇ ಇಷ್ಟ ಪಡ್ತೀನಿ. ಅವರು ಬೆಳೆದಷ್ಟು ಒಂದಷ್ಟು ಜನಕ್ಕೆ ಮಾದರಿಯಾಗಿ ಇರ್ತಾರೆ. ಎಲ್ಲರಿಗೂ ಮಾದರಿಯಾಗಿ ಕೊನೆವರೆಗೂ ದರ್ಶನ್​ ಅವರು ಇರಬೇಕು ಎಂದು ನಾನು ಭಾವಿಸ್ತೀನಿ. ಕಾರಣ ಗೆಲುವು ಲೈಫ್​ ಟೈಮ್​ ಇರಲ್ಲ. ಗೆದ್ದಾಗ ತಗ್ಗಿಬಗ್ಗಿ ನಡೆಯಬೇಕು, ಸೋತಾಗ ಏನು ಮಾಡಿದ್ರು ನಡೆಯುತ್ತೆ. ಗೆದ್ದಾಗ ಎಲ್ಲರ ಕಣ್ಣು ನಮ್ಮ ಮೇಲೆ ಇರುತ್ತೆ, ಸೋತರೆ ಯಾರು ನಮ್ಮನ್ನು ನೋಡಲ್ಲ. ದರ್ಶನ್​ ಅವರು ಮಾತಾಡಿದ್ದು ಸೂಕ್ತ ಅನಿಸಲಿಲ್ಲ. ಅವರು ಮಾತಾಡಿದ್ದು ಅವರಿಗೆ ಸರಿ ಅನಿಸಬೇಕು. ನನ್ನಿಂದ ಏನಾದ್ರೂ ತಪ್ಪಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನದು ತಪ್ಪೇನಿಲ್ಲ, ಕ್ಷಮೆ ಕೇಳುವ ಪ್ರಮೇಯ ಕೂಡ ಇಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ನಾನು ಯೂಟರ್ನ್​ ಹೊಡೆಯೋ ಗಿರಾಕಿ ಅಲ್ಲ. ಸಮಸ್ಯೆ ಬಂದಾಗ ಬೆನ್ನು ತೋರಿಸಲ್ಲ, ನಂದೇನಿದ್ರೂ ಫೇಸ್​ ಟು ಫೇಸ್​​ ಅಷ್ಟೇ ಎಂದಿದ್ದಾರೆ.

Advertisement
Advertisement

Tags :
Advertisement