Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಿನ್ನೆ ದರ್ಶನ್ ಹಾಕಿದ್ದದ್ದು ಸನ್ ಗ್ಲಾಸ್ ಅಲ್ಲ.. ಪವರ್ ಗ್ಲಾಸ್ : ಏನಂದ್ರು ಬಳ್ಳಾರಿ ಎಸ್ಪಿ..?

03:51 PM Aug 30, 2024 IST | suddionenews
Advertisement

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದರು. ಆದರೆ ಟೀ ಕುಡ್ಕಿಂಡು, ಸಿಗರೇಟು ಸೇದುತ್ತಾ ರೌಡಿಶೀಟರ್ ಗಳ ಅಡ್ಡದಲ್ಲಿ ಕೂತಿದ್ದ ಫೋಟೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಜೈಲಿನ ವ್ಯವಸ್ಥೆಯ ಬಗ್ಗೆ ಚರ್ಚೆಯಾಗುವುದಕ್ಕೆ ಶುರುವಾಗಿತ್ತು. ಸದ್ಯ ದರ್ಶನ್ ಅವರನ್ನು ಸೇರಿದಂತೆ ಗ್ಯಾಂಗ್ ಅನ್ನೇ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ನಟ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿದ್ದಾರೆ.

Advertisement

ಬಳ್ಳಾರಿ ಜೈಲಿಗೆ ಬರುವಾಗಲೂ ಬಿಂದಾಸ್ ಆಗಿ ಬಂದಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಸನ್ ಗ್ಲಾಸ್ ಹಾಕಿಕೊಂಡಿದ್ದಾರೆ ಎಂಬ ವಿಚಾರ ಜೋರು ಕೇಳಿ ಬಂದಿತ್ತು. ಟೀ ಶರ್ಟ್ ಕಾಲರ್ ಗೆ ಈ ಗ್ಲಾಸ್ ಅನ್ನು ದರ್ಶನ್ ತಗಲಾಕಿಕೊಂಡಿದ್ದರು. ಅದು ಎಲ್ಲರ ಕಣ್ಣಿಗೂ ಬಿದ್ದಿತ್ತು. ಚರ್ಚೆಯಾಗುತ್ತಿದ್ದಂತೆ ಗ್ಲಾಸ್ ಬಗ್ಗೆಯೂ ಬಳ್ಳಾರು ಎಸ್ಪಿ ಶೋಭರಾಣಿ ಸ್ಪಷ್ಟನೆ ನೀಡಿದ್ದಾರೆ.

'ದರ್ಶನ್ ತಂದಿದ್ದು ಕೂಲಿಂಗ್ ಗ್ಲಾಸ್ ಅಲ್ಲ ಪವರ್ ಗ್ಲಾಸ್. ಅವರು ಜೈಲಿನ ನಿಯಮಗಳನ್ನು ಫಾಲೋ ಮಾಡುತ್ತಿದ್ದಾರೆ. ಪವರ್ ಗ್ಲಾಸ್ ಹಾಕುವವರಿಗೆ ಜೈಲಿನಲ್ಲೂ ಹಾಕುವುದಕ್ಕೆ ಅವಕಾಶವಿದೆ. ಯಾರಿಗಾದರೂ ಕಣ್ಣಿನ ಸಮಸ್ಯೆ ಇದ್ದರೆ ಪವರ್ ಗ್ಲಾಸ್ ಹಾಕುವುದಕ್ಕೆ ಅನುಮತಿ ನೀಡಲಾಗುತ್ತದೆ. ಆ ಪವರ್ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಚೆಕ್ ಮಾಡುತ್ತೇವೆ. ಇಲ್ಲಿ ಎಲ್ಲರಿಗೂ ನಾರ್ಮಲ್ ಫುಡ್ ಇರುತ್ತದೆ. ಅದೇ ಫುಡ್ ಅನ್ನೇ ದರ್ಶನ್ ಅವರು ತಿಂದಿದ್ದಾರೆ. ಜೊತೆಗೆ ಬರುವಾಗ ಅವರಿಗೆ ಕೋಳವನ್ನೇನು ಹಾಕಿಸಿಕೊಂಡು ಬಂದಿಲ್ಲ. ಅದರ ಅವಶ್ಯಕತೆ ಬಂದಿಲ್ಲ. ದರ್ಶನ್ ಜೈಲಿನ ಎಲ್ಲಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದಿದ್ದಾರೆ.

Advertisement

Advertisement
Tags :
actor Darshanballary sppower glasssun glassದರ್ಶನ್ಪವರ್ ಗ್ಲಾಸ್ಬಳ್ಳಾರಿ ಎಸ್ಪಿಸನ್ ಗ್ಲಾಸ್
Advertisement
Next Article