Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರತಾಪ್ ಹೆಸರೇಳಲಿಲ್ಲ ಅಂತ ರೊಚ್ಚಿಗೆದ್ದ ವರ್ತೂರು ಸಂತೋಷ್

11:50 AM Jan 13, 2024 IST | suddionenews
Advertisement

ಟಿಕೆಟ್ ಟು ಫಿನಾಲೆ ನಡೆಯುತ್ತಿದೆ. ಈ ಟಾಸ್ಕ್ ನಲ್ಲಿ ಹೆಚ್ಚು ಅಂಕ ಪಡೆದವರು ಈ ವಾರ ಸೇವ್ ಆಗುತ್ತಾರೆ. ಹೀಗಾಗಿ ಒಬ್ಬೊಬ್ಬರು ಸ್ಪರ್ಧೆಗಳ ರೀತಿ ಆಡುತ್ತಿದ್ದಾರೆ. ದೋಸ್ತಿಗಳು ಅಂತಾನು ನೋಡುತ್ತಿಲ್ಲ, ಅಂಕಗಳು ಹತ್ತಿರತ್ತಿರ ಇದ್ದರೆ ಅವರನ್ನೇ ದೂರ ಇಡುತ್ತಿದ್ದಾರೆ. ಅದರಲ್ಲಿ ಪ್ರತಾಪ್ - ಸಂಗೀತಾರನ್ನು, ನಮ್ರತಾ - ವಿನಯ್ ರನ್ನು ದೂರವಿಟ್ಟಿದ್ದರು. ಅಷ್ಟೇ ಯಾಕೆ ವರ್ತೂರು ಸಂತೋಷ್ - ತುಕಾಲಿಯನ್ನೇ ಇಟ್ಟಿದ್ದರು. ಇದೀಗ ಪ್ರತಾಪ್ ಮಾತಿಗೆ ವರ್ತೂರು ಕೆಂಡಕಾರುತ್ತಿದ್ದಾರೆ. ಅದುವೆ ತನ್ನ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ.

Advertisement

 

ಶುಕ್ರವಾರ ಬಂತು ಎಂದರೆ ಮನೆ ಮಂದಿಗೆಲ್ಲಾ ಸ್ವಲ್ಪ ಭಯ ಜಾಸ್ತಿಯಾಗುತ್ತದೆ. ಒಂದು ಕಡೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸುವುದು. ಮತ್ತೊಂದು ಉತ್ತಮ ಸಿಗುವ ಸಂತಸ. ಈ ವಾರ ಕಳಪೆ ತೆಗೆದುಕೊಳ್ಳುವವರ ವಿಚಾರದಲ್ಲಿ ಕೊಂಚ ಭಯ ಕೂಡ ಜಾಸ್ತಿ ಇದೆ. ಮನೆಯಿಂದ ಹೊರಗೆ ಹೋಗುವ ಭಯ. ಈ ವಾರ ತುಕಾಲಿ ಸಂತು ಕಳಪೆ ತೊಟ್ಟು ಜೈಲಿಗೆ ಹೋಗಿದ್ದಾರೆ.

Advertisement

 

ಪ್ರತಾಪ್ ಕೂಡ ತುಕಾಲಿ ಸಂತೋಷ್ ಅವರಿಗೇನೆ ಕಳಪೆ ನೀಡಿದ್ದಾರೆ. ಅಂಕಗಳ ವಿಚಾರವನ್ನು ತೆಗೆದುಕೊಂಡು ತುಕಾಲಿ ಅವರನ್ನು ಕಳಪೆ ಎಂದೊದ್ದಾರೆ. ಕಡೆಗೂ ಎಲ್ಲರ ಅಭಿಪ್ರಾಯದಿಂದ ತುಕಾಲಿ ಜೈಲು ಸೇರಿದ್ದಾರೆ. ತುಕಾಲಿಗೆ ಜೈಲಿಗೆ ಹೋಗುವುದೇನು ಇಷ್ಟವಿರಲಿಲ್ಲ. ಆದರೂ ಫಿನಾಲೆಗೆ ಹತ್ತಿರತ್ತಿರ ಇರುವಾಗಲೇ ಜೈಲು ಸೇರಿದ್ದಾರೆ.

 

ಸಂತು ಪಂತು ಜೊತೆಗೆ ಇದ್ದರೆ ಮುಗೀತು. ಮನೆಯಲ್ಲಿ ಸದಾ ಜೊತೆಯಲ್ಲಿ ಇರುವುದು ಸಂತು ಮತ್ತು ಪಂತುನೆ. ಜೊತೆಗೆ ಕುಂತಾಗ ಬರೀ ಗಾಸಿಪ್ ಗಳನ್ನೇ ಮಾತನಾಡುತ್ತಾರೆ. ಅವರು ಹಾಗೇ ಇವರು ಹೀಗೆ ಅಂತ. ಯಾರ ಬಗ್ಗೆಯೂ ಪಾಸಿಟಿವ್ ಆಗಿ ಮಾತನಾಡುವುದಿಲ್ಲ‌. ಆದರೆ ಈಗ ಪ್ರತಾಪ್ ತನ್ನ ಹೆಸರು ಹೇಳಲಿಲ್ಲ ಅಂತ ರೊಚ್ಚಿಗೆದ್ದಿದ್ದಾರೆ. ನಿನ್ನ ಪರವಾಗಿ ನಿಂತರು ನನ್ನದೊಂದು ಹೆಸರು ಹೇಳಲಿಲ್ಲವಲ್ಲ ಅಂತ ರೊಚ್ಚಿಗೆದ್ದಿದ್ದಾರೆ.

Advertisement
Tags :
bangaloreBigg boss kannadadrone pratapVarthur Santhoshಡ್ರೋನ್ ಪ್ರತಾಪ್ಪ್ರತಾಪ್ಬೆಂಗಳೂರುವರ್ತೂರು ಸಂತೋಷ್
Advertisement
Next Article