Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವರ್ತೂರು ಸಂತೋಷ್ ಅರೆಸ್ಟ್ : ಹುಲಿ ಉಗುರು ಎಂದು ದೂರು ಕೊಟ್ಟವರು ಯಾರು..?

02:46 PM Oct 23, 2023 IST | suddionenews
Advertisement

 

Advertisement

 

ಬಿಗ್ ಬಾಸ್ ಸೀಸನ್ 10 ಈಗ ಕಾಂಪಿಟೇಷನ್ ಮೂಲಕ ನಡೆಯುತ್ತಿದೆ. ಹೊಸ ಹೊಸ ಟಾಸ್ಕ್ ಗಳನ್ನು ನೀಡುವುದರ ಮೂಲಕ ಬಿಗ್ ಬಾಸ್ ಮಂದಿ ಸೀರಿಯಸ್ ಆಗಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಪೊಲೀಸರ ಅತಿಥಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಬಂದಾಗ ವರ್ತೂರು ಸಂತೋಷ್ ಮೈತುಂಬಾ ಒಡವೆಗಳನ್ನು ಹಾಕಿಕೊಂಡು ಬಂದಿದ್ದರು. ಮನೆಯೊಳಗೂ ಅದೇ ಒಡವೆಗಳನ್ನೇ ಹಾಕಿಕೊಂಡು ಇರುತ್ತಿದ್ದರು. ಆದರೆ ಅದರಲ್ಲಿ ಹುಲಿ ಉಗುರು ಇರುವುದನ್ನೇ ಮರೆತಿದ್ದಾರೆ ಎನಿಸುತ್ತದೆ. ಈಗ ಅರಣ್ಯಾಧಿಕಾರಿಗಳ ಕಣ್ಣಿಗೆ ಅದೇ ಉಗುರು ಬಿದ್ದಿದ್ದು, ಅರೆಸ್ಟ್ ಮಾಡಿದ್ದಾರೆ.

Advertisement

 

ಆರೋಪ ಸಾಬೀತಾದ್ರೆ 3 ರಿಂದ 7 ವರ್ಷ ಜೈಲು ಶಿಕ್ಷೆ ನೀಡುವುದಕ್ಕೆ ಅವಕಾಶವಿದೆ. ವರ್ತೂರು ಪ್ರಕಾಶ್ ಧರಿಸಿರುವುದು ಅಸಲಿ ಹುಲಿ ಉಗುರು. ವನ್ಯಜೀವಿಗಳ ಅಂಗಾಂಗವನ್ನು ಯಾರು ಬಳಸಬಾರದು. ಮತ್ತೊಮ್ಮೆ ದೃಢಪಡಿಸಿಕೊಳ್ಳಲು ಉಗುರನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಎಫ್, ರವೀಂದ್ರ ಕುಮಾರ್ ಹೇಳಿದ್ದಾರೆ.

ದೂರನ್ನು ಯಾರಾದರೂ ನೀಡಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಈ ಬಗ್ಗೆ ರವೀಂದ್ರ ಕುಮಾರ್ ಅವರು ಹೇಳುವ ಮೂಲಕ, ನಮ್ಮ ಮೇಲಾಧಿಕಾರಿಗಳು ಇದರ ಬಗ್ಗೆ ತನಿಖೆ ಮಾಡಲು ಹೇಳಿದರು. ಅದು ಹುಲಿ ಉಗುರಿನಂತೆ ಇದ್ದ ಕಾರಣ, ವರ್ಜಿನಲ್ ಇರಬಹುದಾ ಎಂಬುದನ್ನು ತನಿಖೆ ನಡೆಸಲು ತಿಳಿಸಿದ್ದರು. ಹೀಗಾಗಿ ತನಿಖೆ ಮಾಡಿದಾಗ ಅದರ ನಿಜಾಂಶ ಹೊರಗೆ ಬಂದಿದೆ ಎಂದಿದ್ದಾರೆ. ಹಳ್ಳಿಕಾರ್ ಸಂತೋಷ್ ಎಂದೇ ಖ್ಯಾತಿ ಪಡೆದಿದ್ದ ಸಂತೋಷ್, ತಳಿ ಹಸುಗಳನ್ನು ಸಾಕುವ ಮೂಲಕ ಖ್ಯಾತಿ ಪಡೆದಿದ್ದರು. ಬಿಗ್ ಬಾಸ್ ಮನೆಗೆ ಹೋಗಿದ್ದ ಸಂತೋಷ್ ಅಲ್ಲಿಯೂ ಚಿನ್ನಾಭರಣಗಳನ್ನು ಹಾಕಿಕೊಂಡೇ ಇದ್ದರು.

Advertisement
Tags :
arrestbengalurufeaturedsuddionetiger clawsVarthur Santhoshಅರೆಸ್ಟ್ಬೆಂಗಳೂರುವರ್ತೂರು ಸಂತೋಷ್ಸುದ್ದಿಒನ್ಹುಲಿ ಉಗುರು
Advertisement
Next Article