For the best experience, open
https://m.suddione.com
on your mobile browser.
Advertisement

ಕಣ್ಣನ್ ಗೆ ನೋಟೀಸ್ ನೀಡಿದ್ದ ತಹಶಿಲ್ದಾರ್ ಗೆ ಸಂಕಷ್ಟ : ಸಿಎಂ ಸಿದ್ದರಾಮಯ್ಯ ಟ್ವೀಟ್

01:14 PM Jan 24, 2024 IST | suddionenews
ಕಣ್ಣನ್ ಗೆ ನೋಟೀಸ್ ನೀಡಿದ್ದ ತಹಶಿಲ್ದಾರ್ ಗೆ ಸಂಕಷ್ಟ   ಸಿಎಂ ಸಿದ್ದರಾಮಯ್ಯ ಟ್ವೀಟ್
Advertisement

ಬೆಂಗಳೂರು: ಸಾಹಿತಿ, ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ಚಿಕ್ಕಮಗಳೂರು ತಹಶಿಲ್ದಾರ್ ನೋಟೀಸ್ ಜಾರಿ ಮಾಡಿದ್ದರು. 10 ವರ್ಷದ ಸಂಬಳದ ಹಣವನ್ನು ವಾಪಾಸ್ ನೀಡಲು ಸೂಚಿಸಿದ್ದರು. ಈ ನೋಟೀಸ್ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Advertisement
Advertisement

Advertisement

Advertisement
Advertisement

ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಗಮನಕ್ಕೂ ತರದೆ ತಹಶಿಲ್ದಾರ್ ಈ ನಿರ್ಧಾರವನ್ನು ತೆಗೆದುಕೊಂಡರಾ ಅಂತ. ನಿನ್ನೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ಈ ವಿಚಾರದಲ್ಲಿ ಕಣ್ಣನ್ ಅವರದ್ದು ಯಾವುದೇ ತಪ್ಪು ಇಲ್ಲ ಎಂದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ತಹಶಿಲ್ದಾರ್ ವಿರುದ್ಧ ಗರಂ ಆಗಿದ್ದಾರೆ. ಈ ಮೂಲಕ ನೋಟೀಸ್ ಕೊಟ್ಟು ತನಗೆ ದಂಡ ಹಾಕಿಸಿಕೊಂಡರಾ ತಹಶಿಲ್ದಾರ್ ಎಂಬ ಚರ್ಚೆ ನಡೆಯುತ್ತಿದೆ.

Advertisement
Tags :
Advertisement