Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೋಕಸಭಾ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ ಟಿಕೆಟ್ : ಶಾಸಕ ಮುನಿರತ್ನ ಹೇಳಿದ ಸೀಕ್ರೆಟ್ ಏನು..?

05:30 PM Oct 22, 2023 IST | suddionenews
Advertisement

ಬೆಂಗಳೂರು: ಸದ್ಯಕ್ಕೆ ಬೆಳಗಾವಿ ರಾಜಕಾರಣದಲ್ಲಿ ಈಗಾಗಲೇ ಟಿಕೆಟ್ ಫೈಟ್ ಶುರುವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಎಲ್ಲವೂ ಸರಿ ಇಲ್ಲ ಎಂಬುದೇನೋ ಆಗಾಗ ಪ್ರೂವ್ ಆಗ್ತಾ ಇದೆ. ಇದೀಗ ಶಾಸಕ ಮುನಿರತ್ನ ಅವರು ಲೋಕಸಭಾ ಚುನಾವಣೆಯ ಸೀಕ್ರೆಟ್ ಒಂದನ್ನು ಹೇಳಿದ್ದಾರೆ.

Advertisement

'ನನಗೆ ಗೊತ್ತಿರುವಂತೆ ಸತೀಶ್ ಜಾರಕಿಹೊಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸತೀಶ್ ಜಾರಕಿಹೊಳಿ ಇಷ್ಟಯ ದಿನ ನಮ್ಮ ಬೆಳಗಾವಿ, ನಮ್ಮ ಭದ್ರಕೋಟೆ ಎಂದುಕೊಂಡಿದ್ದರು. ಅದೆಲ್ಲೋ ಒಂದು ಕಡೆ ಕೈತಪ್ಪಿ, ಅವರ ಕುಟುಂಬಕ್ಕೆ ಟಿಕೆಟ್ ಸಿಗುವುದು ಅನುಮಾನವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದನ್ನ ನಾನು ಹೇಳ್ತಿಲ್ಲ. ಜನರೇ ಹೇಳಿತ್ತಿದ್ದಾರೆ. ಅವರೆಲ್ಲ 135 ಜನ ಒಂದೇ ಪಕ್ಷದಲ್ಲಿದ್ದಾರೆ'.

ಅಷ್ಟು ಜನ ಒಟ್ಟಿಗೆ ಹೋಗುತ್ತಿದ್ದಾರೆ ಎಂದರೆ ಎಷ್ಟು ಒಗ್ಗಟ್ಟಿದೆ ಎಂಬುದು ಗೊತ್ತಾಗುತ್ತೆ. ಆದರೆ ಸತೀಶ್ ಜಾರಕಿಹೊಳಿ ವೀಕ್ ಆಗುತ್ತಿದ್ದಾರೆ. ಬೆಳಗಾವಿಯಲ್ಲಿ ಅವರಿಗೆ ಇದ್ದ ವರ್ಚಸ್ಸು ಕಡಿಮೆ ಆಗ್ತಾ ಇದೆ. ಮುಂದೊಂದು ದಿನ ಮೂಲೆ ಗುಂಪಾಗಲಿದ್ದಾರೆ. ಸತೀಶ್ ಜಾರಕಿಹೊಳಿಯ ಭದ್ರಕೋಟೆಯ ಒಂದೊಂದೆ ಕಲ್ಲು ಬೀಳುತ್ತಿದೆ ಎಂದಿದ್ದಾರೆ.

Advertisement

Advertisement
Tags :
bengalurulakshmi hebbalkarLok Sabha electionsMLA Munirathsuddioneಟಿಕೆಟ್ಲಕ್ಷ್ಮೀ ಹೆಬ್ಬಾಳ್ಕರ್ಲೋಕಸಭಾ ಚುನಾವಣೆಶಾಸಕ ಮುನಿರತ್ನ
Advertisement
Next Article