Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪುತ್ರನಿಗೆ ಟಿಕೆಟ್ : ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ ಲಾಯರ್ ಜಗದೀಶ್

02:57 PM Oct 21, 2024 IST | suddionenews
Advertisement

ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪುತ್ರನಿಗೆ ಟಿಕೆಟ್ : ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ ಲಾಯರ್ ಜಗದೀಶ್

Advertisement

ಬಿಗ್ ಬಾಸ್ ನಿಂದ ಈಗಷ್ಟೇ ಮನೆಯಿಂದ ಹೊರ ಬಂದಿರುವ ಲಾಯರ್ ಜಗದೀಶ್ ರಾಜಕೀಯಕ್ಕೆ ಎಂಟ್ರಿಯಾಗುವ ಪ್ಲ್ಯಾನ್ ನಡೆಸುತ್ತಿದ್ದಾರೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದೇ ಕ್ಷೇತ್ರದ ಮೇಲೆ ಲಾಯರ್ ಜಗದೀಶ್ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಎರಡು ಕ್ಷೇತ್ರಗಳಿಗೂ ಟಿಕೆಟ್ ಅನೌನ್ಸ್ ಮಾಡಿದೆ. ಆದರೆ ಕಾಂಗ್ರೆಸ್ ಮಾತ್ರ ಯಾವ ಕ್ಷೇತ್ರಗಳಿಗೂ ಅನೌನ್ಸ್ ಮಾಡಿಲ್ಲ. ಹೀಗಾಗಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಭರತ್ ವಿರುದ್ಧ ಸ್ಪರ್ಧೆಗೆ ಸಿದ್ದ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. 'ನನಗೆ ಕಾಂಗ್ರೆಸ್ ಹೈಕಮಾಂಡ್ ಯಾರೂ ಗೊತ್ತಿಲ್ಲ. ಅಕಾಸ್ಮಾತ್ ಕಾಂಗ್ರೆಸ್ ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಜನರ ಸೇವೆ ಮಾಡುವುದಕ್ಕೆ ಯಾವ ಕೆಲಸ ಕೊಟ್ಟರು ಮಾಡುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಕರೆದು ಕೆಲಸ ಕೊಟ್ಟರೆ ಅದನ್ನು ನಾನು ನಿರ್ವಹಿಸುತ್ತೇನೆ ' ಎಂದಿದ್ದಾರೆ.

Advertisement

ಬಿಗ್ ಬಾಸ್ ಸೀಸನ್ 11ರಿಂದ ಮಧ್ಯದಲ್ಲಿಯೇ ಹೊರ ಬಂದಿದ್ದಾರೆ ಜಗದೀಶ್. ಮನೆಯೊಳಗಿನ ಹೆಣ್ಣು ಮಕ್ಕಳ ನಡುವೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಬಿಗ್ ಬಾಸ್ ಅವರನ್ನು ಹೊರ ಹಾಕಿದೆ. ಮತ್ತೆ ವಾಪಾಸ್ ಬಿಗ್ ಬಾಸ್ ಗೆ ಹೋಗಬಹುದು ಎಂಬ ಊಹೆ ಇತ್ತು. ಆದರೆ ಹೀಗೆ ರಾಜಕೀಯ ಪ್ರವೇಶಕ್ಕೂ ಆಸಕ್ತಿ ತೋರುತ್ತಿರುವುದನ್ನು ಗಮನಿಸಿದರೆ ಜಗದೀಶ್ ಬಿಗ್ ಬಾಸ್ ಗೆ ವಾಪಾಸ್ ಹೋಗುವುದು ಅನುಮಾನ ಎನ್ನಲಾಗಿದೆ.

Advertisement
Tags :
bengaluruBommaichitradurgaCongressLawyer JagadishShiggamvisuddionesuddione newsಕಾಂಗ್ರೆಸ್ಚಿತ್ರದುರ್ಗಟಿಕೆಟ್ಬೆಂಗಳೂರುಬೊಮ್ಮಾಯಿಲಾಯರ್ ಜಗದೀಶ್ಶಿಗ್ಗಾಂವಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article