Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಉದಯನಿಧಿಗೆ ಹಣ ಜಾಸ್ತಿಯಾಗಿದೆ, ಧರ್ಮ ಇಲ್ಲ‌ ಎಂದವರನ್ನ ಗಲ್ಲಿಗೇರಿಸಬೇಕು : ಕೊತ್ತೂರು ಮಂಜುನಾಥ್

11:20 AM Oct 03, 2023 IST | suddionenews
Advertisement

 

Advertisement

ಕೋಲಾರ: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಕೊತ್ತೂರು ಮಂಜುನಾಥ್ ತಿರುಗೇಟು ನೀಡಿದ್ದಾರೆ. ಧರ್ಮ ಇಲ್ಲ ಎಂದು ಹೇಳುವವರನ್ನು, ಆ ಧರ್ಮ ಈ ಧರ್ಮ ಎಂದು ಹೇಳುವವರನ್ನು ಗಡಿಪಾರು ಮಾಡಬೇಕು ಎಂದಿದ್ದಾರೆ. ಉದಯ ನಿಧಿ ಅವರಿಗೆ ದುಡ್ಡು ಜಾಸ್ತಿಯಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಕೋಲಾರದಲ್ಲಿ ಮಾತನಾಡಿ ಶಾಸಕ ಕೊತ್ತೂರು ಮಂಜುನಾಥ್, ಉದಯನಿಧಿ ಮೆಂಟಲ್ ಆಗಿದ್ದಾರೆ. ಹಣ ಜಾಸ್ತಿಯಾದ ಪರಿಣಾಮ ಮೆಂಟಲ್ ಆಗಿದ್ದಾರೆ. ನಾವೂ ಇರುವುದು ಭಾರತದಲ್ಲಿ. ಯಾರು ಯಾವ ಧರ್ಮ ಬೇಕಾದರೂ ಪಾಲನೆ ಮಾಡಬಹುದು. ನಿನ್ನ ಧರ್ಮವನ್ನು ನೀನು ಪಾಲನೆ ಮಾಡು, ನನ್ನ ಧರ್ಮವನ್ನು ನಾನು ಪಾಲನೆ ಮಾಡುತ್ತೇನೆ. ನನ್ನ ಧರ್ಮವನ್ನು ಪಾಲನೆ ಮಾಡಬೇಡ ಎನ್ನುವುದಕ್ಕೆ ಯಾರಿಗೂ ಹಕ್ಕು ಇಲ್ಲ ಎಂದು ಕೊತ್ತೂರು ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರು‌. ಆ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ಪರ ವಿರೋಧ ಕೇಳಿ ಬಂದಿತ್ತು. ಇದೀಗ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿ, ಕೊತ್ತೂರು ಮಂಜುನಾಥ್ ಧರ್ಮದ ಬಗ್ಗೆ ಮಾತನಾಡಿದ್ದಾರೆ.

Advertisement
Tags :
bengalurufeaturedkolaraKothur ManjunathsuddioneUdayanidhiಉದಯನಿಧಿಕೊತ್ತೂರು ಮಂಜುನಾಥ್ಕೋಲಾರಜಾಸ್ತಿಧರ್ಮಬೆಂಗಳೂರುಸುದ್ದಿಒನ್ಹಣ
Advertisement
Next Article