For the best experience, open
https://m.suddione.com
on your mobile browser.
Advertisement

ಉದಯನಿಧಿಗೆ ಹಣ ಜಾಸ್ತಿಯಾಗಿದೆ, ಧರ್ಮ ಇಲ್ಲ‌ ಎಂದವರನ್ನ ಗಲ್ಲಿಗೇರಿಸಬೇಕು : ಕೊತ್ತೂರು ಮಂಜುನಾಥ್

11:20 AM Oct 03, 2023 IST | suddionenews
ಉದಯನಿಧಿಗೆ ಹಣ ಜಾಸ್ತಿಯಾಗಿದೆ  ಧರ್ಮ ಇಲ್ಲ‌ ಎಂದವರನ್ನ ಗಲ್ಲಿಗೇರಿಸಬೇಕು   ಕೊತ್ತೂರು ಮಂಜುನಾಥ್
Advertisement

Advertisement
Advertisement

ಕೋಲಾರ: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಕೊತ್ತೂರು ಮಂಜುನಾಥ್ ತಿರುಗೇಟು ನೀಡಿದ್ದಾರೆ. ಧರ್ಮ ಇಲ್ಲ ಎಂದು ಹೇಳುವವರನ್ನು, ಆ ಧರ್ಮ ಈ ಧರ್ಮ ಎಂದು ಹೇಳುವವರನ್ನು ಗಡಿಪಾರು ಮಾಡಬೇಕು ಎಂದಿದ್ದಾರೆ. ಉದಯ ನಿಧಿ ಅವರಿಗೆ ದುಡ್ಡು ಜಾಸ್ತಿಯಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಕೋಲಾರದಲ್ಲಿ ಮಾತನಾಡಿ ಶಾಸಕ ಕೊತ್ತೂರು ಮಂಜುನಾಥ್, ಉದಯನಿಧಿ ಮೆಂಟಲ್ ಆಗಿದ್ದಾರೆ. ಹಣ ಜಾಸ್ತಿಯಾದ ಪರಿಣಾಮ ಮೆಂಟಲ್ ಆಗಿದ್ದಾರೆ. ನಾವೂ ಇರುವುದು ಭಾರತದಲ್ಲಿ. ಯಾರು ಯಾವ ಧರ್ಮ ಬೇಕಾದರೂ ಪಾಲನೆ ಮಾಡಬಹುದು. ನಿನ್ನ ಧರ್ಮವನ್ನು ನೀನು ಪಾಲನೆ ಮಾಡು, ನನ್ನ ಧರ್ಮವನ್ನು ನಾನು ಪಾಲನೆ ಮಾಡುತ್ತೇನೆ. ನನ್ನ ಧರ್ಮವನ್ನು ಪಾಲನೆ ಮಾಡಬೇಡ ಎನ್ನುವುದಕ್ಕೆ ಯಾರಿಗೂ ಹಕ್ಕು ಇಲ್ಲ ಎಂದು ಕೊತ್ತೂರು ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರು‌. ಆ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ಪರ ವಿರೋಧ ಕೇಳಿ ಬಂದಿತ್ತು. ಇದೀಗ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿ, ಕೊತ್ತೂರು ಮಂಜುನಾಥ್ ಧರ್ಮದ ಬಗ್ಗೆ ಮಾತನಾಡಿದ್ದಾರೆ.

Advertisement

Tags :
Advertisement