For the best experience, open
https://m.suddione.com
on your mobile browser.
Advertisement

ತಲೆ ಬುರುಡೆಯಲ್ಲಾದ ಸಮಸ್ಯೆಯಾಗಿದ್ದನ್ನು ವೈದ್ಯರು ಸರಿ ಮಾಡಿದ್ದಾರೆ : ಆಸ್ಪತ್ರೆಯಿಂದಾನೆ ತಿಳಿಸಿದ ಸದ್ಗುರು

08:21 PM Mar 20, 2024 IST | suddionenews
ತಲೆ ಬುರುಡೆಯಲ್ಲಾದ ಸಮಸ್ಯೆಯಾಗಿದ್ದನ್ನು ವೈದ್ಯರು ಸರಿ ಮಾಡಿದ್ದಾರೆ   ಆಸ್ಪತ್ರೆಯಿಂದಾನೆ ತಿಳಿಸಿದ ಸದ್ಗುರು
Advertisement

ನವದೆಹಲಿ: ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರಿಗೆ ಅನಾರೋಗ್ಯ ಸಂಭವಿಸಿ, ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಸರಿ ಇದೆ ಎಂಬುದನ್ನು ಸ್ಚತಃ ಅವರೇ ಸ್ಪಷ್ಟಪಡಿಸಿದ್ದಾರೆ. ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಸದ್ಗುರು ಚಿಕಿತ್ಸೆ ಸದ್ಯ ಯಶಸ್ವುಯಾಗಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.

Advertisement
Advertisement

'ಅಪೋಲೋ ಆಸ್ಪತ್ರೆಯ ವೈದ್ಯರು ನನ್ನ ಬ್ರೈನ್ ಅನ್ನು ಸರ್ಜರಿ ಮಾಡಿದ್ದಾರೆ. ತಲೆ ಬುರುಡೆಯಲ್ಲಿ ಆಗಿದ್ದ ಸಮಸ್ಯೆಯನ್ನು ವೈದ್ಯರು ಸರಿ ಮಾಡಿದ್ದಾರೆ. ತಲೆ‌ ಮೇಲೆ ಪ್ಯಾಚ್ ಹಾಕಿದ್ದಾರೆ. ನಾನು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೀನಿ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯವಾಗಿದ್ದೀನಿ' ಎಂದು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡು ವಿಡಿಯೋ ಮಾಡಿ, ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಕಿಂಚ ಧೈರ್ಯ ಬಂದಿದೆ.

Advertisement

ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಬ್ರೇನ್ ಸರ್ಜರಿ ಆಗಿದೆ ಎಂದು ಅವರ ಅಭಿಮಾನಿಗಳು, ಭಕ್ತರು ಆತಂಕ ವ್ಯಕ್ತಪಡಿಸಿದ್ದರು. ಜಗ್ಗಿ ವಾಸುದೇವ್ ಅವರು ಶೀಘ್ರ ಗುಣಮುಖರಾಗಬೇಕು ಎಂದು ಇಶಾ ಫೌಂಡೇಶನ್​ನ ಭಕ್ತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸದ್ಗುರು ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದೀಗ ತಮ್ಮ ಆರೋಗ್ಯದ ಬಗ್ಗೆ ಸದ್ಗುರು ಅವರೇ ಸ್ಪಷ್ಟನೆ ನೀಡಿದ್ದಾರೆ. ಸದ್ಗುರು ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಒಂದೊಂದು ಮಾತು ಕೇಳುವುದಕ್ಕೆ ಫ್ಯಾನ್ಸ್ ಕಾಯುತ್ತಿರುತ್ತಾರೆ. ಹೀಗಿರುವಾಗ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಎಂದಾಗ ಸಹಜವಾಗಿಯೇ ಆತಂಕಗೊಂಡ ಫ್ಯಾನ್ಸ್ ದೇವರ ಮೊರೆ ಹೋಗಿದ್ದರು.

Advertisement
Advertisement

Advertisement
Tags :
Advertisement