For the best experience, open
https://m.suddione.com
on your mobile browser.
Advertisement

ಕೆಸ್ಆರ್ಟಿಸಿ ಅಧಿಕಾರಿಗೆ ಮಚ್ಚು ತೋರಿಸಿದ ಶಾಸಕ ತನ್ವೀರ್ ಸೇಠ್ ಬೆಂಬಲಿಗರು : ಪೊಲೀಸರಿದ್ದರು ಡೋಂಟ್ ಕೇರ್..!

09:26 PM Dec 12, 2022 IST | suddionenews
ಕೆಸ್ಆರ್ಟಿಸಿ ಅಧಿಕಾರಿಗೆ ಮಚ್ಚು ತೋರಿಸಿದ ಶಾಸಕ ತನ್ವೀರ್ ಸೇಠ್ ಬೆಂಬಲಿಗರು   ಪೊಲೀಸರಿದ್ದರು ಡೋಂಟ್ ಕೇರ್
Advertisement

ಮೈಸೂರು: KSRTC ಅಧಿಕಾರಿಗೆ ಪೊಲೀಸರ ಎದುರೇ ಶಾಸಕ ತನ್ವೀರ್ ಸೇಠ್ ಅವರ ಬೆಂಬಲಿಗರಿಂದ ಧಮ್ಕಿ ಹಾಕಿರುವ ಘಟನೆ ಸಾತಗಳ್ಳಿ ಬಸ್ ಡಿಪೋದಲ್ಲಿ ನಡೆದಿದೆ.

Advertisement
Advertisement

ಶಾಸಕ ತನ್ವೀರ್ ಸೇಠ್ ಅವರ ಬೆಂಬಲಿಗರು ಎನ್ನಲಾದ ಷಫಿ ಅಹ್ಮದ್ ಹಾಗೂ ಅವರ ಪತ್ನಿ ಕೆ ಎಸ್ ಆರ್ ಟಿ ಸಿ ನಿಲ್ದಾಣದ ಕಟ್ಟಡವನ್ನು ಬಾಡಿಗೆ ಪಡೆದಿದ್ದರು. ಶಾಲೆ ನಡೆಸುವುದಾಗಿ ಹೇಳಿದ್ದರು. ಇದರ ಬಾಡಿಗೆ 1‌ ಕೋಟಿ 80 ಲಕ್ಷ ಕೊಡಬೇಕಾಗಿತ್ತು. ಆದರೆ ಈ ಹಣವನ್ನು ನೀಡಿರಲಿಲ್ಲ. ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಆ ಬಾಡಿಗೆ ಹಣವನ್ನು ಕೇಳುವುದಕ್ಕೆ ಹೋಗಿದ್ದರು.

Advertisement

ಅಲ್ಲಿ ಪೊಲೀಸರು ಕೂಡ ಇದ್ದರು. ಅಧಿಕಾರಿಗಳು ಬಾಡಿಗೆ ಹಣ ಕೇಳಿದ ಕೂಡಲೇ ಷಫಿ ಅವರ ಹೆಂಡತಿ, ಪೇಪರ್ ನಲ್ಲಿ ಸುತ್ತಿಕೊಂಡು ಬಂದಿದ್ದ ಮಚ್ಚನ್ನು ತೆಗೆದಿದ್ದಾರೆ. ಮಚ್ಚು ತೋರಿಸಿ ಅವಾಜ್ ಹಾಕಿದ್ದಾರೆ. ನಾನು ಜೈಲಿಗೆ ಹೋಗುವುದಕ್ಕೆ ಸಿದ್ದ ಎಂದು ಅವಾಜ್ ಹಾಕಿದ್ದಾರೆ. ಅಲ್ಲಿಯೇ ಇದ್ದ ಪೊಲೀಸರು ಮಚ್ಚು ಕಿತ್ತುಕೊಳ್ಳಲು ಹರಸಾಹಸ ಪಟ್ಟರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Advertisement
Tags :
Advertisement