Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದರ್ಶನ್ ನೋಡಲು ಬಂದ ಅಕ್ಕ-ಬಾವ : ತಾಯಿ ಬಳಿ ಕಣ್ಣೀರು ಹಾಕಿದ ಪವಿತ್ರಾ ಗೌಡ..!

05:27 PM Jul 10, 2024 IST | suddionenews
Advertisement

ಬೆಂಗಳೂರು: ಮನೆ ಊಟಕ್ಕೆ, ಹಾಸಿಗೆಗೆ, ಪುಸ್ತಕಕ್ಕಾಗಿ ನಟ ದರ್ಶನ್ ಪರ ವಕೀಲರು ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಕೋರ್ಟ್ ಅದಕ್ಕೆ ಅನುಮತಿ ನೀಡಲಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ದರ್ಶನ್ ಅವರ ಅಕ್ಕ ಮತ್ತು ಬಾವ, ಮಗ ಜೈಲಿಗೆ ಬಂದು ದರ್ಶನ್ ಅವರನ್ನು ನೋಡಿಕೊಂಡು ಹೋಗಿದ್ದಾರೆ. ಈ ವೇಳೆ ಹಣ್ಣು, ಬಟ್ಟೆಗಳನ್ನು ತಂದುಕೊಟ್ಟಿದ್ದಾರೆ. ಜೊತೆಗೆ ಸ್ನ್ಯಾಕ್ಸ್ ಕೂಡ ತಂದಿದ್ದರು. ಆದರೆ ಪೊಲೀಸಿನವರು ಅದಕ್ಕೆ ಅನುಮತಿ ನೀಡಿಲ್ಲ.

Advertisement

ಅತ್ತ ಪವಿತ್ರಾ ಗೌಡ ಅವರನ್ನು ನೋಡಲು ಆಕೆಯ ತಾಯಿ ಜೈಲಿಗೆ ಬಂದಿದ್ದಾರೆ. ಆಗ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ ಎನ್ನಲಾಗ್ತಾ ಇದೆ. ಪವಿತ್ರಾ ಗೌಡ ತಾಯಿ ಮುಂದೆ ಕಣ್ಣೀರು ಹಾಕುತ್ತಾ ದರ್ಶನ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ದರ್ಶನ್ ನನ್ನನ್ನ ಅವೈಡ್ ಮಾಡ್ತಾ ಇದಾರೆ, ನನ್ನಿಂದಾನೇ ಹೀಗೆಲ್ಲಾ ಆಗಿದ್ದು ಅಂತಿದ್ದಾರೆ ಎಂದೆಲ್ಲಾ ಅಳಲು ತೋಡಿಕೊಂಡಿದ್ದಾರಂತೆ‌. ಜೊತೆಗೆ ಮನೆಯ ಊಟಕ್ಕಾಗಿ ಕೋರ್ಟ್ ನಲ್ಲಿ ಮನವಿ ಮಾಡಲು ಪವಿತ್ರಾ ಗೌಡ ಕೂಎ ತಾಯಿ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ದರ್ಶನ್ ಸದ್ಯ ಪವಿತ್ರಾ ಗೌಡ ಜೊತೆಗೆ ಮಾತನಾಡುತ್ತಿಲ್ಲವಂತೆ.‌ ಒಂದೇ ಜೈಲಿನಲ್ಲಿ ಇದ್ದರು ಭೇಟಿಗೂ ಅವಕಾಶ ನೀಡುತ್ತಿಲ್ಲವಂತೆ. ಹೀಗಾಗಿ ಪವಿತ್ರಾ ಗೌಡಗೆ ಭಯ ಆಗಿದೆಯಂತೆ. ದರ್ಶನ್ ಫ್ಯಾಮಿಲಿ ಕೂಡ ಪವಿತ್ರಾ ಗೌಡ ಸಹವಾಸ ಬಿಟ್ಟರೆ ಮಾತ್ರ ಜೈಲಿನಿಂದ ಬಿಡಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಆ ಕಂಡಿಷನ್ ಗೆ ದರ್ಶನ್ ಅವರು ಒಪ್ಪಿಕೊಂಡಿದ್ದು, ಪವಿತ್ರಾ ಭೇಟಿಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ.

Advertisement

Advertisement
Tags :
bengaluruchitradurgadarshanPavitra GowdaSister and brother-in-lawsuddionesuddione newsಅಕ್ಕ-ಬಾವಕಣ್ಣೀರು ಹಾಕಿದಚಿತ್ರದುರ್ಗತಾಯಿದರ್ಶನ್ಪವಿತ್ರಾ ಗೌಡಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article