For the best experience, open
https://m.suddione.com
on your mobile browser.
Advertisement

ಮುಸ್ಲಿಮರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ : ಬಿಜೆಪಿ ನಾಯಕರು ಕೆಂಡಾಮಂಡಲ

11:38 AM Dec 05, 2023 IST | suddionenews
ಮುಸ್ಲಿಮರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ   ಬಿಜೆಪಿ ನಾಯಕರು ಕೆಂಡಾಮಂಡಲ
Advertisement

ಬೆಳಗಾವಿ: ನೀವೂ ಕೂಡ ಭಾರತೀಯರು ಅಲ್ವಾ. ಈ ದೇಶ ನಿಮಗೂ ಸೇರಬೇಕು ಅಲ್ವಾ..? ನಿಮಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ಆರ್ ಅಶೋಕ್, ಅಶ್ವತ್ಥ್ ನಾರಾಯಣ್, ಮಹೇಶ್ ಟೆಂಗಿನಕಾಯಿ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement
Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾತನಾಡಿ, ಇದಕ್ಕಿಂತ ದರಿದ್ರ ಸರ್ಕಾರ ನಮ್ಮ ದೇಶದಲ್ಲಿ ಸಿಗುವುದಕ್ಕೆ ಚಾನ್ಸೇ ಇಲ್ಲ. ಇದಕ್ಕೆಲ್ಲಾ ಉತ್ತರ ಲೋಕಸಭಾ ಚುನಾವಣೆಯ ಬಳಿಕ ಉತ್ತರ ಸಿಗಲಿದೆ ಎಂದಿದ್ದಾರೆ.

Advertisement

ಮುಸ್ಲಿಮರಿಗೆ ಸಂಪತ್ತು ಕೊಡೋಕೆ ಸಿದ್ದರಾಮಯ್ಯ ಯಾರು‌? ಮುಸ್ಲಿಮರಿಗೆ ಪಾಕಿಸ್ತಾನ ನೀಡಲಾಗಿದೆ. ಇದೇನು ಅವರ ಅಪ್ಪನ ಆಸ್ತಿ ಅಲ್ಲ. ಹತ್ತು ಸಾವಿರ ಕೋಟಿ ಹಂಚಲು ಸಿದ್ದರಾಮಯ್ಯ ಅಪ್ಪನ ಆಸ್ತಿನಾ..? ಹಿಂದೂಗಳ ತೆರಿಗೆಯಿಂದ ದೇಶ ನಡೆಯುತ್ತಿದೆ. ಈ ದೇಶದ ಅನ್ನ ತಿಂದ ಋಣ ಏನಾದ್ರೂ ಇದೆಯಾ ಎಂದು ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

ನಿನ್ನೆ ಮಾತನಾಡಿದ್ದು ದೇಶದ ದೃಷ್ಟಿಯಿಂದ ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿಯಾದಂತ ಹೇಳಿಕೆ ಕೊಟ್ಟು ಹಿಂದೂಗಳನ್ನು ಎರಡನೇ ದರ್ಜೆಯ ರೀತಿ ನೋಡುವಂತೆ ಮಾಡುತ್ತಿದ್ದಾರೆ. ಹಿಂದೆ ಟಿಪ್ಪು ಜಯಂತಿ, ಶಾದಿ ಭಾಗ್ಯ ಮಾಡಿದರು. ಮದುವೆಗೆಲ್ಲಾ ಹಣ ಕೊಡುವುಂತೆ ಮಾಡಿದರು‌ ಯಾಕೆ ಹಿಂದೂಗಳಲ್ಲಿ ಬಡವರು ಇಲ್ವಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶ್ವತ್ಥ್ ನಾರಾಯಣ್ ಮಾತನಾಡಿ, ಸಿದ್ದರಾಮಯ್ಯ ಅವರು ಒಂದೊಳ್ಳೆ ಆಡಳಿತವನ್ನು ಕೊಟ್ಟು ಜನಪರ ಕೆಲಸ ಮಾಡಿದರೆ, ಎಲ್ಲಾ ಸಮುದಾಯಕ್ಕೂ, ಅಲ್ಪಸಂಖ್ಯಾತರಿಗೂ ಎಲ್ಲರಿಗೂ ಸಲ್ಲುವಂತದ್ದು ಆಗಬೇಕು. ಬರಿಜ ರಾಜಕೀಯ ಪ್ರೇರಿತವಾಗಿ, ಮತವನ್ನು ಗಮನದಲ್ಲಿಟ್ಟುಕೊಂಡು, ಕೋಮುವಾದಿಗಳು ಅಂತ ಇದ್ದರೆ ಅದು ಕಾಂಗ್ರೆಸ್ ಪಕ್ಷದವರು. ಯಾರಿಗೆ ಹಕ್ಕಿಲ್ಲ. ಪ್ರತಿಯೊಬ್ಬರ ಭಾರತೀಯನಿಗೂ ಸಮಾನವಾದ ಹಕ್ಕಿದೆ‌ ಎಂದಿದ್ದಾರೆ.

Advertisement
Tags :
Advertisement