Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಿವಮೊಗ್ಗದ ಬಿಜೆಪಿ ಮುಖಂಡ ಬಿಜಾಪುರದಲ್ಲಿ ಅರೆಸ್ಟ್..!

04:10 PM Aug 06, 2024 IST | suddionenews
Advertisement

ಶಿವಮೊಗ್ಗ: ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಿಜೆಪಿ ಮುಖಂಡ ಬಿಜಾಪುರದಲ್ಲಿ ಅರೆಸ್ಟ್ ಆಗಿದ್ದಾರೆ. ಶರತ್ ಕಲ್ಯಾಣಿ ಬಂಧಿತ ಆರೋಪಿಯಾಗಿದ್ದಾರೆ. ಇವರು ಬಿಜೆಪಿಯ ಸೋಷಿಯಲ್ ಮೀಡಿಯಾ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದರು.

Advertisement

ಶರತ್ ಕಲ್ಯಾಣಿ 42 ವರ್ಷದ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ ಎನ್ನುವ ಆರೋಪ ಕೇಳಿ ಬಂದಿತ್ತು. ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಕೂಡ ಬೇಳೆಸಿದ್ದ ಆರೋಪ ಕೇಳಿ ಬಂದಿತ್ತು. ದೂರು ದಾಖಲಾಗುತ್ತಿದ್ದಂತೆ ಶರತ್ ಕಲ್ಯಾಣಿ ತಲೆ‌ಮರೆಸಿಕೊಂಡಿದ್ದರು. ಸದ್ಯ ಪೊಲೀಸರು ಪತ್ತೆ ಹಚ್ಚಿದ್ದು ಬಿಜಾಪುರದಲ್ಲಿ ಲಾಕ್ ಆಗಿದ್ದಾರೆ.

ಒಂದು ವಾರದಿಂದ ಕಾಣಿಸದೆ ನಾಪತ್ತೆಯಾಗಿದ್ದರು. ಕಡೆಗೂ ಪೊಲೀಸರು ತಮ್ಮ ಕಾಂಟ್ಯಾಕ್ಟ್ ಗಳನ್ನ ಬಳಸಿ, ತಮ್ಮ ಬುದ್ದಿವಂತಿಕೆ ಉಪಯೋಗಿಸಿ ಶರತ್ ಕಲ್ಯಾಣಿಯನ್ನ ಹಿಡಿದಿದ್ದಾರೆ. ಶಿವಮೊಗ್ಗದ ಮಹಿಳಾ ಪೊಲೀಸರು ಆತನ ಕೈಗೆ ಕೋಳ ತೊಡಿಸಿದ್ದಾರೆ.

Advertisement

ಜುಲೈ 26ರಂದು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರೀತಿ ನಾಟಕವಾಡಿ, ನಂಬಿಸಿದ್ದ, ವಂಚನೆ ಕೇಸು ಒಂದು ಕಡೆಯಾದರೆ, ನಾಲ್ಕು ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ಮಹಿಳಾ ಪೊಲೀಸರು ಈತ‌ನನ್ನು ಎಲ್ಲಿಯೇ ಅಡಗಿದ್ದರು ಬಿಡದೇ, ಅರೆಸ್ಟ್ ಮಾಡಿದ್ದಾರೆ. ಬಿಜೆಪಿಯ ಸೋಷಿಯಲ್ ಮೀಡಿಯಾದ ಸಂಚಾಲಕರಾಗಿ, ಬೇರೊಬ್ಬರಿಗೆ ಮೋಸ ಮಾಡಿದ್ದಾನೆ. ವಿಚ್ಚೇಧಿತ ಮಹಿಳೆಗೆ ಬಣ್ಣ ಬಣ್ಣದ ಮಾತುಗಳನ್ನಾಡಿ, ಮದುವೆ ಆಗಿಯೇ ಬಿಡುತ್ತೇನೆಂದು ನಂಬಿಸಿದ್ದಾನೆ. ಈತ ಹೇಳಿದ್ದೆಲ್ಲ ಸುಳ್ಳು, ಮದುವೆಯಾಗುವುದು ಸುಳ್ಳು ಎಂದು ತಿಳಿದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ತಲೆಮರೆಸಿಕೊಂಡಿದ್ದವನನ್ನು ಕರೆತಂದು, ವಿಚಾರಣೆ ನಡೆಸುತ್ತಿದ್ದಾರೆ.

Advertisement
Tags :
abscondingarrestedBijapurbjp leaderRape CaseShimogaಅತ್ಯಾಚಾರ ಪ್ರಕರಣಅರೆಸ್ಟ್ಬಿಜಾಪುರಬಿಜೆಪಿ ಮುಖಂಡಶಿವಮೊಗ್ಗ
Advertisement
Next Article