Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ನಿಧನ : ಸಿಎಂ ಸಿದ್ದರಾಮಯ್ಯ ಸಂತಾಪ

04:28 PM Jan 06, 2024 IST | suddionenews
Advertisement

ಮಂಗಳೂರು: ನಾಡಿನ ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಅವರು ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಸಾಹಿತಿ ಸೋಮೇಶ್ವರ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ನಿಧನರಾಗಿದ್ದಾರೆ.

Advertisement

ಕನ್ನಡ ಮತ್ತು ತುಳು ಭಾಷೆಯಲ್ಲಿ ತಮ್ಮ ಕೃತಿಗಳನ್ನು ಪ್ರಸ್ತುಪಡಿಸುತ್ತಿದ್ದರು. ಅದರ ಜೊತೆಗೆ ಯಕ್ಷಗಾನ, ಜಾನಪದ, ತುಳು, ಕನ್ನಡದಲ್ಲಿ ತಮ್ಮ ಸಾಹಿತ್ಯದ ಘಮಲು ತೋರಿಸಿದ್ದರು. ಇದರ ಜೊತೆಗೆ ಕಥೆ, ಕವನ, ಕಾದಂಬರಿಗಳನ್ನು ಬರೆದಿದ್ದರು. ಕಳೆದ ಎರಡಯ ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಸಾಹಿತಿಗಳು ಇಂದು ನಿಧನರಾಗಿದ್ದಾರೆ.

Advertisement

ಇನ್ನು ಸಾಹಿತಿಗಳ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಪ್ರಖ್ಯಾತ ಜಾನಪದ ವಿದ್ವಾಂಸ, ಸಂಸ್ಕೃತಿ ಚಿಂತಕ ಮತ್ತು ಶಿಷ್ಯರ ಮೆಚ್ಚಿನ ಗುರು ಪ್ರೊ.ಅಮೃತ ಸೋಮೇಶ್ವರ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Advertisement
Tags :
bangaloreCM SiddaramaiahcondolencesMangalorepassed awayProf. Amrita SomeswaraSenior Literatureನಿಧನ ಸುದ್ದಿಪ್ರೊ.ಅಮೃತ ಸೋಮೇಶ್ವರಬೆಂಗಳೂರುಮಂಗಳೂರುಸಿಎಂ ಸಿದ್ದರಾಮಯ್ಯಹಿರಿಯ ಸಾಹಿತಿ
Advertisement
Next Article