Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಹೋದರ ವಿಕ್ರಂ ಸಿಂಹ ಬಂಧನದ ಬಳಿಕ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಗರಂ

12:37 PM Dec 31, 2023 IST | suddionenews
Advertisement

ಸುದ್ದಿಒನ್, ಮೈಸೂರು, ಡಿಸೆಂಬರ್.31 : ಹಾಸನದಲ್ಲಿ ಮರಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.

Advertisement

ಮಾನ್ಯ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು. ಅವರನ್ನು ಶ್ಲಾಘನೆ ಮಾಡಬೇಕು ಎಂದುಕೊಂಡಿದ್ದೇನೆ. ತನ್ನ ಮಗನ ರಾಜಕೀಯ ಭವಿಷ್ಯ ಹಾಗೂ ಲೋಕಸಭೆಯಲ್ಲಿ ಮಗನನ್ನು ಗೆಲ್ಲಿಸಲು ಯಾರನ್ನು ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ಇಂತಹ ತಂದೆ ಎಲ್ಲರಿಗೂ ಸಿಗುವುದಿಲ್ಲ. ನೀವೊಬ್ಬ ಬ್ರಿಲಿಯಂಟ್ ಫಾದರ್. ನಿಮ್ಮನ್ನು ಮೆಚ್ಚಿದೆ ನಾನು.

ನಿಮ್ಮನ್ನ ಮೆಚ್ಚಲು ಎರಡು ಕಾರಣಗಳಿವೆ. ಪ್ರತಾಪ್ ಸಿಂಹ ಅಡ್ಡಿಯಾಗುತ್ತಾರೆ ಎಂದು ಮುಗಿಸಲು ಮುಂದಾಗಿದ್ದಾರೆ. ನಿಮ್ಮಂತ ತಂದೆ ಪ್ರಪಂಚದಲ್ಲಿಯೇ ಸಿಗುವುದಿಲ್ಲ. ಎಲ್ಲಾ‌ಮಕ್ಕಳಿಗೂ ನಿಮ್ಮಂತ ತಂದೆ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಮತ್ತೊಂದು ವಿಚಾರ ಅಂದ್ರೆ ನೀವೂ ಬ್ರಿಲಿಯಂಟ್ ಪೊಲಿಟಿಷಿಯನ್. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಆ ವಿಷಯವನ್ನು ಡೈವರ್ಟ್ ಮಾಡಲು‌ ನನ್ನ ವಿಚಾರ ಇಟ್ಟುಕೊಂಡಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಪೊಲೀಸರು ಬಂಧಿಸಿದ ಬಳಿಕ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಅರಣ್ಯ ಇಲಾಖೆ ಪೊಲೀಸರ ವಶದಲ್ಲಿರುವ ವಿಕ್ರಂ ಅವರಿಗೆ ಹೈಬಿಪಿ ಕಾಣಿಸಿಕೊಂಡಿದೆ. ಹಾಸನದ ವೈದ್ಯಕೀಯ ಭೋದಕ ಆಸ್ಪತ್ರೆಯಲ್ಲಿ ವಿಕ್ರಂ ಸಿಂಹ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಗಂಟೆಗಳ ಕಾಲ ವಿಕ್ರಂ ಅವರಿಗೆ ರೆಸ್ಟ್ ಮಾಡಲು ಹೇಳಿದ್ದಾರೆ. ಬಳಿಕ ಮರಗಳ ಮಾರಣಹೋಮದ ವಿಚಾರಣೆ ನಡೆಸಲಿದ್ದಾರೆ.

Advertisement
Tags :
bangaloreCM SiddaramaiahCM SiddaramaiahaGaram againstPratap SimhPratap simhaSalutations to youಗರಂಪ್ರತಾಪ್ ಸಿಂಹಬೆಂಗಳೂರುಸಾಷ್ಟಾಂಗ ನಮಸ್ಕಾರಗಳುಸಿದ್ದರಾಮಯ್ಯ
Advertisement
Next Article