Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೋಕಸಭೆಗೆ ನುಗ್ಗುವ ಮುನ್ನ ಸಾಗರ್ ಶರ್ಮಾ ಮಾಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್..!

11:36 AM Dec 14, 2023 IST | suddionenews
Advertisement

ನಿನ್ನೆ ಇಡೀ ದೇಶವೇ ಒಂದು ಕ್ಷಣ ಆತಂಕಗೊಳ್ಳುವಂತ ವಾತಾವರಣ ನಿರ್ಮಾಣ ಮಾಡಿದ್ದರು ಕೆಲವು ಕಿಡಿಗೇಡಿಗಳು. ಲೋಕಸಭೆಗೆ ನುಗ್ಗಿ, ಭಯ ಉಂಟು ಮಾಡಿದ್ದರು. ಈ ಸಂಬಂಧ ಈಗಾಗಲೇ ಐವರನ್ನು ಅರೆಸ್ಟ್ ಮಾಡಲಾಗಿದೆ. ತನಿಖೆ ಚುರುಕುಗೊಂಡಿದೆ. ಇದರ ನಡುವೆ ಆರೋಪಿ ಸಾಗರ್ ಶರ್ಮಾ ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟರ್ ವೈರಲ್ ಆಗಿದೆ.

Advertisement

ಆರೋಪಿ ಸಾಗರ್ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಯತ್ನ ಮಾಡುವ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದರು. 'ಸೋಲು ಗೆಲುವಿಗಿಂತ ಪ್ರಯತ್ನ ಮಾಡುವುದು ಮುಖ್ಯ. ನೀವೂ ಗೆದ್ದರೂ ಸೋತರು ಪ್ರಯತ್ನ ಮಾಡುವುದು ಮುಖ್ಯ. ನೋಡೋಣಾ ಎಷ್ಟು ಸುಂದರವಾದ ಜರ್ನಿ ಇದೆ ಎಂದು. ನಿಮ್ಮನ್ನು ಮತ್ತೆ ನೋಡುವ ಭರವಸೆ ಇದೆ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಸದ್ಯಕ್ಕೆ ವೈರಲ್ ಆಗಿದೆ.

ಸಾಗರ್ ಶರ್ಮಾ ಹಾಗೂ ಮನೋರಂಜನ್ ಇಬ್ಬರು ನಿನ್ನೆ ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅದೃಷ್ಟವಶಾತ್ ಯಾರಿಗೂ ಏನು ತೊಂದರೆಯಾಗಿಲ್ಲ. ಆದರೆ ಲೋಕಸಭೆಯ ಒಳಗೆ ಈ ರೀತಿ ನುಗ್ಗಿ ದಾಂಧಲೆ ನಡೆಸಿದ್ದು ಆತಂಕಕಾರಿ ಘಟನೆಯಾಗಿದೆ. ಅಷ್ಟು ದೊಡ್ಡ ಭದ್ರತೆಯ ನಡುವೆಯೂ ಒಳಗೆ ಬಂದಿದ್ದು ಮಾತ್ರ ಆಶ್ಚರ್ಯವಾಗಿದೆ. ಇದಕ್ಕೆಲ್ಲ ಕಾರಣ ಪ್ರತಾಪ್ ಸಿಂಹ ಅವರು ನೀಡಿದ ಪಾಸ್. ಅವರ ಪಾಸ್ ನಿಂದಾಗಿಯರೆ ಒಳಗೆ ಬರಲು ಸುಲಭವಾಗಿದೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ದಾರೆ. ಹೀಗಾಗಿ ಸಾರ್ವಜನಿಕರ ಪ್ರವೇಶಕ್ಕೆ ಈಗ ಕಠಿಣ ನಿಯಮಗಳನ್ನು ಮಾಡಲಾಗಿದೆ. ಯಾರಿಗೆಂದರೆ ಯಾರಿಗೆ ಇನ್ಮುಂದೆ ಪಾಸ್ ಸಿಗದ ಹಾಗೆ ಎಚ್ಚರವಹಿಸಲಾಗಿದೆ.

Advertisement

Advertisement
Tags :
bangalorelok sabhaPost viralSagar SharmaSocial mediasocial media postಪೋಸ್ಟ್ ವೈರಲ್ಬೆಂಗಳೂರುಲೋಕಸಭೆಸಾಗರ್ ಶರ್ಮಾಸೋಷಿಯಲ್ ಮೀಡಿಯಾ
Advertisement
Next Article