Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಮೇಶ್ ಕುಮಾರ್ ಆಪ್ತನ ಕೊಲೆ ಮಾಡಿದ್ದು ರಮೇಶ್ ಕುಮಾರ್ ಅಪ್ಪಟ ಅಭಿಮಾನಿ : ತನಿಖೆಯಲ್ಲಿ ಬಯಲಾಗಿದ್ದೇನು..?

12:52 PM Oct 24, 2023 IST | suddionenews
Advertisement

 

Advertisement

ಕೋಲಾರ: ನಿನ್ನೆ ನಡೆದ ಎಂ ಶ್ರೀನಿವಾಸ್ ಹತ್ಯೆ ಕೋಲಾರವನ್ನೆ ನಡುಗಿಸಿದೆ. ಶ್ರೀನಿವಾಸಪುರದಲ್ಲಿ ಹತ್ಯೆ ಮಾಡಲಾಗಿದ್ದು, 12 ಗಂಟೆ ಒಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈಗಾಗಲೇ ತನಿಖೆ ಶುರು ಮಾಡಿದ್ದು, ಹತ್ಯೆಗೆ ಶ್ರೀನಿವಾಸಪುರದ ರಾಜಕೀಯವೇ ಕಾರಣ ಎನ್ನಲಾಗಿದೆ. ಶ್ರೀನಿವಾಸ್ ಕೊಲೆಗೆ ಸುಪಾರಿ ಕೊಟ್ಟಿರುವುದೇ ಪ್ರಮುಖ ಆರೋಪಿಯಾಗಿರುವ ವೇಣುಗೋಪಾಲ್ ಎನ್ನಲಾಗಿದೆ.

ಕಳೆದ ಐದು ವರ್ಷಗಳ ಹಿಂದೆ ವೇಣುಗೋಪಾಲ್ ಮನೆ ಮೇಲೆ ದಾಳಿ ನಡೆದಿತ್ತು. ಹಳೆ ವಯುಷಮ್ಯದ ಹಿನ್ನೆಲೆ ವೇಣು ಸುಪಾರಿ ಕೊಟ್ಟಿದ್ದಾರೆ. ಅವರಿಗೆ ಅವರ ಸ್ನೇಹಿತರಾದ ಮುನೀಂದ್ರ, ಸಂತೋಷ್ ಸೇರಿ ಹತ್ಯೆ ಮಾಡಿದ್ದಾರೆ. ತನಿಖೆ ವೇಳೆ ಮತ್ತೊಂದು ವಿಚಾರ ಬಯಲಾಗಿದೆ. ವೇಣು ಕೂಡ ರಮೇಶ್ ಕುಮಾರ್ ಅಪ್ಪಟ ಅಭಿಮಾನಿ ಎಂಬುದು.

Advertisement

ಆರೋಪಿ ವೇಣುಗೋಪಾಲ್ ಎದೆಯ ಮೇಲೆ ರಮೇಶ್ ಕುಮಾರ್ ಅವರ ಟ್ಯಾಟೋ ಇದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅಭಿಮಾನಿಯಿಂದಲೇ ಕಾಂಗ್ರೆಸ್ ಮುಖಂಡನ ಕೊಲೆ ನಡೆದಿದೆ ಎನ್ನಲಾಗಿದೆ. ಶ್ರೀನಿವಾಸ್ ಅವರ ಭೀಕರ ಕೊಲೆ ನಡೆದ ಬಳಿಕ A1 ಆರೋಪಿ ವೇಣು ಎದೆಯ ಮೇಲೆ ರಮೇಶ್ ಕುಮಾರ್ ಟ್ಯಾಟೋ ಹಾಕಿಸಿಕೊಂಡಿರೋ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Advertisement
Tags :
featuredinvestigationkolararamesh kumarsuddionetrue fanಅಪ್ಪಟ ಅಭಿಮಾನಿಆಪ್ತಕೊಲೆಕೋಲಾರತನಿಖೆರಮೇಶ್ ಕುಮಾರ್ಸುದ್ದಿಒನ್
Advertisement
Next Article