For the best experience, open
https://m.suddione.com
on your mobile browser.
Advertisement

ರಜನೀಕಾಂತ್ ಪ್ರಯತ್ನ ವಿಫಲ : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಐಶ್ವರ್ಯಾ-ಧನುಶ್

06:29 AM Apr 09, 2024 IST | suddionenews
ರಜನೀಕಾಂತ್ ಪ್ರಯತ್ನ ವಿಫಲ   ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಐಶ್ವರ್ಯಾ ಧನುಶ್
Advertisement

ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಅಳಿಯ ಮತ್ತು ಮಗಳು ತಮ್ಮ ದಾಂಪತ್ಯವನ್ನು ಜೀವನವನ್ನು ಕೊನೆಗೂ ಅಂತ್ಯ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೇ ಡಿವೋರ್ಸ್ ಪಡೆಯಲು ಮುಂದಾಗಿದ್ದರು. ಆದರೆ ಮಗಳ ಸಂಸಾರವನ್ನು ಮತ್ತೆ ಸರಿ ಮಾಡುವುದಕ್ಕೆ ರಜನೀಕಾಂತ್ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಅಳಿಯ ಹಾಗೂ ಮಗಳು ಇಬ್ಬರಿಗೂ ಬುದ್ದಿವಾದ ಹೇಳಿದ್ದರು. ಯಾವುದು ಕೂಡ ಪ್ರಯೋಜನವಾಗಿಲ್ಲ. ಇಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.

Advertisement
Advertisement

ಕಳೆದ ಕೆಲವು ವರ್ಷಗಳಿಂದ ಗಂಡ-ಹೆಂಡತಿ ಬೇರೆ ಬೇರೆ ವಾಸವಾಗಿದ್ದಾರೆ. ಮಕ್ಕಳಿಗೋಸ್ಕರ ಇಬ್ಬರು ಒಂದಾಗುತ್ತಾರೆ ಎಂದೇ ನಂಬಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಎಷ್ಟೇ ಮನವರಿಕೆ ಮಾಡಿದರು ಪ್ರಯೋಜನವಾಗಿಲ್ಲ. ಸುಮಾರು 18 ವರ್ಷದ ಪ್ರೀತಿಯನ್ನು ಕಳೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಚೆನ್ನೈನ ಫ್ಯಾಮಿಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Advertisement

Advertisement
Advertisement

ನಟ ಧನುಷ್ ಮತ್ತು ಐಶ್ವರ್ಯಾ 2004ರಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಮಕ್ಕಳಿಗಾಗಿ ಪ್ರತ್ಯೇಕವಾದ ಮೇಲೂ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ತಿದ್ರು. ಶಾಲಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಆಗಾಗ ಭೇಟಿಯಾಗಿ ಸ್ನೇಹಿತರಂತೆ ಇದ್ದರು. ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಇದರ ಮಧ್ಯೆ ಧನುಷ್, ಐಶ್ವರ್ಯಾ ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

Advertisement
Tags :
Advertisement