For the best experience, open
https://m.suddione.com
on your mobile browser.
Advertisement

ಆಂಧ್ರದಲ್ಲಿ ಪವನ್ ಕಲ್ಯಾಣ್ ಗೆಲುವು : ಹರಿದು ಬರುತ್ತಿದೆ ಅಭಿನಂದನೆಗಳ ಮಹಾಪೂರ..

04:42 PM Jun 04, 2024 IST | suddionenews
ಆಂಧ್ರದಲ್ಲಿ ಪವನ್ ಕಲ್ಯಾಣ್ ಗೆಲುವು   ಹರಿದು ಬರುತ್ತಿದೆ ಅಭಿನಂದನೆಗಳ ಮಹಾಪೂರ
Advertisement

ಸುದ್ದಿಒನ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಇತಿಹಾಸ ಸೃಷ್ಟಿಸಿದ್ದಾರೆ. ಪಿಠಾಪುರದಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಬಹುಮತದೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು ಮಹಾಪೂರವೇ ಹರಿದುಬರುತ್ತಿದೆ.

Advertisement

ವೈಸಿಪಿ ಅಭ್ಯರ್ಥಿ ವಂಗ ಗೀತಾ ವಿರುದ್ಧ ಪವನ್ ಗೆಲುವು ಸಾಧಿಸಿದ್ದಕ್ಕೆ ಜನ ಸಂಭ್ರಮಿಸುತ್ತಿದ್ದಾರೆ. ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಪವನ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

Advertisement

ಈಗಾಗಲೇ ಅಭಿಮಾನಿಗಳು ಪವನ್ ಮನೆ ತಲುಪಿದ್ದು, ಪವನ್ ಪತ್ನಿ ಅನ್ನಾ ಲೆಜಿನೋವಾ ಹಾಗೂ ಅಕಿರಾ ನಂದನ್ ಹೊರ ಬಂದು ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಅನ್ನಾ ಲೆಜಿನೋವಾ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಿರುವಾಗ ಅಕಿರಾ ಗೇಟ್ ಬಳಿ ನಿಂತಿದ್ದನ್ನು ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗುತ್ತಿವೆ. ಪವನ್ ಗೆಲುವನ್ನು ಚಿತ್ರರಂಗದಲ್ಲಿಯೂ ಸಂಭ್ರಮಿಸಲಾಗುತ್ತಿದೆ. ಅನೇಕ ನಾಯಕರು, ಚಿತ್ರರಂಗದ ಗಣ್ಯರು ಮತ್ತು ನಟರು ಈಗಾಗಲೇ ಜನಸೇನಾ ಮುಖ್ಯಸ್ಥರಿಗೆ ತಮ್ಮ ಶುಭಾಶಯಗಳನ್ನು ಟ್ವೀಟ್ ಮಾಡುತ್ತಿದ್ದಾರೆ.

Advertisement

ಮೆಗಾ ಹೀರೋ ಸಾಯಿ ಧರಮ್ ತೇಜ್, ನಿತಿನ್, ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಪವನ್‌ಗೆ ಶುಭ ಹಾರೈಸಿ ಸರಣಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಬೇಬಿ ನಿರ್ಮಾಪಕ ಎಸ್ ಕೆಎನ್ ಪವನ್ ಅವರನ್ನು ಅಭಿನಂದಿಸಿರುವ ಅವರು, ತಂತ್ರಗಾರಿಕೆಯನ್ನು ನನಗೆ ಬಿಟ್ಟುಬಿಡಿ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ನಿರ್ಮಾಪಕ ನಾಗವಂಶಿ, ನಟ ಬಹರ್ಮಾಜಿ, ನಿರ್ದೇಶಕ ಮಾರುತಿ, ಕಾಜಲ್ ಅಗರ್ವಾಲ್ ಜನಸೇನಾ ನಾಯಕನಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

Advertisement
Advertisement

ಮತ್ತೊಂದೆಡೆ ಮಾಸ್ ಮಹಾರಾಜ ರವಿತೇಜ ಅಭಿನಯದ ಮಿಸ್ಟರ್ ಬಚ್ಚನ್ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಚಿತ್ರತಂಡ ಸಿಹಿ ಹಂಚಿ, ಪಟಾಕಿ ಸಿಡಿಸಿ ಕುಣಿದು ಸಂಭ್ರಮಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ನಿರ್ದೇಶಕ ಹರೀಶ್ ಶಂಕರ್ ಭಾಗವಹಿಸಿದ್ದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ.

Advertisement
Tags :
Advertisement