Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪೇಜಾವರ ಶ್ರೀಗಳ ಮೇಲೆ ಬಿದ್ದ ತಕ್ಕಡಿ : ಈಗ ಶ್ರೀಗಳ ಆರೋಗ್ಯ ಹೇಗಿದೆ..?

05:31 PM Nov 03, 2023 IST | suddionenews
Advertisement

ದೆಹಲಿ: ತುಲಭಾರ ನಡೆಸುತ್ತಿದ್ದ ವೇಳೆ ಪೇಜಾವರ ಶ್ರೀಗಳ ತಲೆಯ ಮೇಲೆ ತಕ್ಕಡಿಯ ಸರಳುಗಳು ಬಿದ್ದಿವೆ. ಸದ್ಯ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು ಅಪಾಯದಿಂದ ಪಾರಾಗಿದ್ದಾರೆ. ದೆಹಲಿಯ ಪೇಜಾವರದ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Advertisement

ಪೇಜಾವರ ಶ್ರೀಗಳಿಗೆ 60 ವರ್ಷ ತುಂಬಿದೆ. ಈ ಸುಸಮಯದಲ್ಲಿ ಶ್ರೀಗಳ ಪ್ರಸನ್ನಾಭಿನಂದನ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಕ್ತರೆಲ್ಲಾ ಸೇರಿ ಶ್ರೀಗಳಿಗೆ ತುಲಭಾರ ನಡೆಸಿದ್ದಾರೆ. ತುಲಭಾರದ ವೇಳೆ ಅವಘಡ ಒಂದು ಸಂಭವಿಸಿದ್ದು, ತಕ್ಕಡಿಯ ಚೈನ್ ಕಟ್ ಆಗಿ ಶ್ರೀಗಳ ತಲೆಯ ಮೇಲೆ ಬಿದ್ದಿದೆ.

ಶ್ರೀಗಳ ಮೇಲೆ ಶ್ರೀಕೃಷ್ಣ ಪರಮಾಪ್ತನ ಆಶೀರ್ವಾದವಿತ್ತು ಎನಿಸುತ್ತದೆ. ಅದಕ್ಕೆ ಶ್ರೀಗಳಿಗೆ ಅಷ್ಟೇನು ತೊಂದರೆ ಆಗಿಲ್ಲ. ತಲೆಗೆ ಕೊಂಚ ಪರಚಿದ ಗಾಯದಂತೆ ಆಗಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎನ್ನಲಾಗಿದ್ದು, ಅದರ ಜೊತೆಗೆ ಘಟನೆಯ ಬಳಿಕ ನಾಲ್ಕೈದು ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ ಎನ್ನಲಾಗಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂಬುದನ್ನು ಕೇಳಿದ ಭಕ್ತವೃಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Advertisement
Tags :
bangalorenew Delhipejavara sreeನವದೆಹಲಿಪೇಜಾವರ ಶ್ರೀಬೆಂಗಳೂರುಶ್ರೀಗಳ ಆರೋಗ್ಯ
Advertisement
Next Article