For the best experience, open
https://m.suddione.com
on your mobile browser.
Advertisement

ದರ್ಶನ್ ಅಭಿಮಾನಿಗಳಿಂದ ಒಳ್ಳೆ ಹುಡುಗ ಪ್ರಥಮ್ ಜೀವ ಬೆದರಿಕೆ..!

04:07 PM Jun 19, 2024 IST | suddionenews
ದರ್ಶನ್ ಅಭಿಮಾನಿಗಳಿಂದ ಒಳ್ಳೆ ಹುಡುಗ ಪ್ರಥಮ್ ಜೀವ ಬೆದರಿಕೆ
Advertisement

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲು ಪಾಲಾಗಿದೆ. ದಿನೇ ದಿನೇ ಕೇಸು ಸ್ಟ್ರಾಂಗ್ ಆಗ್ತಾ ಇದ್ದು, ಹೊರಗೆ ಬರುವುದು ಅನುಮಾನವೇ ಸರಿ. ಇದರ ನಡುವೆ ದರ್ಶನ್ ಫ್ಯಾನ್ಸ್ ಒಳ್ಳೆ ಹುಡುಗ ಪ್ರಥಮ್ ಅವರಿಗೆ ದರ್ಶನ್ ಫ್ಯಾನ್ಸ್ ಕೊಲೆ ಬೆದರಿಕೆ ಹಾಕಿದ್ದಾರಂತೆ. ಈ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಮಾತನಾಡಿದ್ದಾರೆ.

Advertisement

'ಏಯ್ ನಿನ್ ತಲೆ ತೆಗಿತೀನಿ ಅಂತ ಎರಡೂವರೆ ರಾತ್ರಿಗೆ ಫೋನ್ ಮಾಡ್ತಾರೆ. ಮಲಗಿದ್ರು ಪರವಾಗಿಲ್ಲ. ಎದ್ದೇಳಿಸಿ ಅವರಿಗೆ ಫೋನ್ ಕೊಡಿ ಅಂತಾರೆ. ಆಫೀಸ್ ಫೋನ್ ಎಂದರೆ ಅವೆಲ್ಲಾ ಗೊತ್ತಿಲ್ಲ ಎದ್ದೇಳಿಸಿ ಪ್ರಥಮ್ ಗೆ ಫೋನ್ ಕೊಡಿ ಅಂತಾರೆ. ಎರಡೂವರೆ ರಾತ್ರಿಯಲ್ಲಿ ಪೆದ್ದನ ಥರ ಫೋನ್ ಮಾಡ್ತಾನೆ. ದರ್ಶನ್ ಅಭಿಮಾನಿಗಳಿಗೆ ಹೇಳೋದೇನು ಗೊತ್ತಾ. ಕಾನೂನು, ಕಾನೂನಿನ ರೀತಿಯಲ್ಲಿ ಕೆಲಸ ಮಾಡುತ್ತದೆ. ಪೊಲೀಸರು ಪೊಲೀಸರ ರೀತಿ ಕೆಲಸ ಮಾಡುತ್ತಾರೆ. ಲಾಯರ್ ಕೋರ್ಟ್ ನಲ್ಲಿ ಕೆಲಸ ಮಾಡುತ್ತಾರೆ. ಮಾಧ್ಯಮದವರು ಮೈಕ್ ಹಿಡಿದು ಕೆಲಸ ಮಾಡುತ್ತಾರೆ. ನೀವೂ ಆರಾಮವಾಗಿ ಇದ್ದುಕೊಂಡು, ಕೆಲಸ ಮಾಡಿ, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದಿದ್ದಾರೆ.

Advertisement

ಅಂದಾಭಿಮಾನಿಗಳು ಅಲ್ಲಿ ಕೂತು ರೋಡ್ ಬ್ಲಾಕ್ ಮಾಡ್ತಾರೆ. ನಾಲ್ಕು ತದ್ಕಿ ಅಂದಾಭಿಮಾನಿಗಳನ್ನು ಕಳುಹಿಸಿ ಎಂದು ಹೇಳಿದೆ. ಆದರೆ ಇವರಿಗ್ಯಾಕೆ ಕೋಪ ಬರ್ತಾ ಇದೆ ಎಂಬುದು ಮಾತ್ರ ಗೊತ್ತಿಲ್ಲ ಎಂದು ಒಳ್ಳೆ ಹುಡುಗ ಪ್ರಥಮ್ ಕೂಗಾಡಿದ್ದಾರೆ. ದರ್ಶನ್ ಅವರ ಅಭಿಮಾನಿಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ. ಸದ್ಯ ದರ್ಶನ್ ಅಂಡ್ ಗ್ಯಾಂಗ್ ಕಂಬಿ ಹಿಂದೆ ನಿಂತು ಎಣಿಕೆ ಕೆಲಸ ಮಾಡುತ್ತಿದ್ದಾರೆ.

Advertisement

Advertisement
Advertisement
Advertisement
Tags :
Advertisement