For the best experience, open
https://m.suddione.com
on your mobile browser.
Advertisement

ದರ್ಶನ್ ನೋಡಲು ಕಡೆಗೂ ಪರಪ್ಪನ ಅಗ್ರಹಾರಕ್ಕೆ ಬಂದ ತಾಯಿ ಹಾಗೂ ಸಹೋದರ..!

01:57 PM Jul 01, 2024 IST | suddionenews
ದರ್ಶನ್ ನೋಡಲು ಕಡೆಗೂ ಪರಪ್ಪನ ಅಗ್ರಹಾರಕ್ಕೆ ಬಂದ ತಾಯಿ ಹಾಗೂ ಸಹೋದರ
Advertisement

Advertisement

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿಗೆ ಎಚ್ಚರಿಕೆ ನೀಡುವುದಕ್ಕೆ ಹೋಗಿ ದರ್ಶನ್ ಅಂಡ್ ಗ್ಯಾಂಗ್ ಕೊಲೆಯನ್ನೇ ಮಾಡಿ, ಜೈಲು ಪಾಲಾಗಿದ್ದಾರೆ. ಅದರಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಜೈಲು ಸೇರಿದಾಗಿನಿಂದ ತಾಯಿ ಮೀನಾ ಅವರಾಗಲೀ, ಸಹೋದರ ದಿನಕರ್ ತೂಗುದೀಪ ಅವರಾಗಲೀ ಭೇಟಿ ಕೊಟ್ಟಿರಲಿಲ್ಲ. ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ತಾಯಿ ಮತ್ತು ತಮ್ಮ ಭೇಟಿ ನೀಡಿದ್ದಾರೆ.

Advertisement

ದರ್ಶನ್ ದೊಡ್ಡ ಸೆಲೆಬ್ರೆಟಿ. ಅವರು ಇದು ಎರಡನೇ ಸಲ ಜೈಲಿಗೆ ಹೋಗುತ್ತಿರುವುದು. ಹೀಗಾಗಿ ಎಲ್ಲರ ಫೋಕಸ್ ದರ್ಶನ್ ಮೇಲಿದೆ. ಇದರ ನಡುವೆ ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್ ಗಳ ಕಾಟ ಒಂದೊಂದೆ ಒಂದೊಂದೆ ಬಯಲಿಗೆ ಬರುತ್ತಿದೆ. ಅದರಲ್ಲೂ ಇಂಡಸ್ಟ್ರಿಯಲ್ಲಿರುವ ನಾಯಕಿಯರಿಗೇನೆ ಆ ರೀತಿ ಕೆಟ್ಟದಾಗಿ ಮೆಸೇಜ್ ಮಾಡಿರುವುದು ಬೆಳಕಿಗೆ ಬರುತ್ತಿದೆ.

Advertisement

ಇದರ ನಡುವೆ ದರ್ಶನ್ ಅವರ ಸ್ಥಿತಿ ಕಂಡು ಕನ್ನಡ ಚಿತ್ರರಂಗದ ಕೆಲವರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಶಿವಣ್ಸ, ಹಂಸಲೇಖ ಸೇರಿದಂತೆ ಹಲವರು ಈ ರೀತಿ ಆಗಬಾರದಿತ್ತು ಎಂದೇ ಹೇಳುತ್ತಿದ್ದಾರೆ. ಇನ್ನು ರಕ್ಷಿತಾ ಮತ್ತು‌ ಪ್ರೇಮ್ ಜೈಲಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ. ಹೀಗಾಗಲೇ ವಿಜಯಲಕ್ಷ್ಮೀ ಹಾಗೂ ಮಗ ವಿನಿಶ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟು ಬಂದಿದ್ದಾರೆ. ದರ್ಶನ್ ಅವರನ್ನು ಜೈಲಿನಿಂದ ಹೊರತರಲು ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಇದೀಗ ತಾಯಿ ಮೀನಾ ಸಹೋದರ ದಿನಕರ್ ಜೈಲಿಗೆ ಭೇಟಿ ಕೊಟ್ಟು, ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. ಮಗನ ಸ್ಥಿತಿ ಕಂಡು ಮೀನಾ ಕಣ್ಣೀರು ಹಾಕಿದ್ದಾರೆ.

Advertisement
Advertisement

Advertisement
Tags :
Advertisement