For the best experience, open
https://m.suddione.com
on your mobile browser.
Advertisement

ಎನ್‌ಡಿಎ ಸಭೆಯಲ್ಲಿ ನಿತೀಶ್ ಮಾತಿಗೆ ಮೋದಿ ಭಾವುಕ...!

06:00 PM Jun 07, 2024 IST | suddionenews
ಎನ್‌ಡಿಎ ಸಭೆಯಲ್ಲಿ ನಿತೀಶ್ ಮಾತಿಗೆ ಮೋದಿ ಭಾವುಕ
Advertisement

ಸುದ್ದಿಒನ್, ನವದೆಹಲಿ, ಜೂನ್. 07 : ಇಂದು
ನಡೆದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಪಾರ್ಲಿಮೆಂಟರಿ ಪಕ್ಷದ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ನೀವು ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದೀರಿ, ಆದರೆ ದೇಶದ ಜನರು ಅದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅತ್ಯಂತ ಕಡಿಮೆ ಬಹುಮತ ನೀಡಿದ್ದಾರೆ. ಇದನ್ನು ಕೇಳಿದ ನರೇಂದ್ರ ಮೋದಿ ಭಾವುಕರಾದರು. ನಿತೀಶ್ ಕುಮಾರ್ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು, ಈ ಬಾರಿ ಅಲ್ಲೊಬ್ಬರು, ಇಲ್ಲೊಬ್ಬರು ಯಶಸ್ಸು ಸಾಧಿಸಿದ್ದಾರೆ. ಕೊನೆಗೆ ಎಲ್ಲರೂ ಸೋಲುತ್ತಾರೆ. ದೇಶದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಮೋದಿಯಿಂದ ಮಾತ್ರ ಸಾಧ್ಯ ಎಂದು ನಿತೀಶ್ ಕುಮಾರ್ ಹೇಳಿದರು.

ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಸೇವೆ ಸಲ್ಲಿಸಿದ್ದು, ಏನಾದರೂ ಉಳಿದಿದ್ದರೆ ಮುಂದಿನ ಬಾರಿ ಎಲ್ಲ ರಾಜ್ಯಗಳಿಗೂ ಪೂರೈಸುವ ವಿಶ್ವಾಸವಿದೆ ಎಂದು ನಿತೀಶ್ ಕುಮಾರ್ ಹೇಳಿದರು. “ನಮ್ಮ ಪಕ್ಷ ಜನತಾ ದಳ (ಯುನೈಟೆಡ್) ಭಾರತೀಯ ಜನತಾ ಪಕ್ಷದ ಸಂಸದೀಯ ಪಕ್ಷದ ನಾಯಕ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. 10 ವರ್ಷಗಳ ಕಾಲ ಪ್ರಧಾನಿಯಾಗಿದ್ದ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಿರುವುದು ಸಂತಸದ ಸಂಗತಿ. ನಾವು ಐದು ವರ್ಷಗಳ ಕಾಲ ಅವರೊಂದಿಗೆ ಇರುತ್ತೇವೆ. ಅವರು ಏನು ಮಾಡಿದರೂ ಮತ್ತು ಹೇಗೆ ಮಾಡಿದರೂ, ತುಂಬಾ ಚೆನ್ನಾಗಿ ಮಾಡುತ್ತಾರೆ ಎಂದು ನಿತೀಶ್ ಕುಮಾರ್ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

Advertisement

https://x.com/ANI/status/1798978006012293357?t=es7H6sEsKx5zq3rEYc1uZA&s=19

Advertisement

ನೀವು ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದೀರಿ, ಇದೆಲ್ಲದರ ನಂತರ ಹೀಗೆ ನಡೆಯಬಾರದಿತ್ತು ಎಂದು ಹೇಳಿದರು. ಆದರೆ, ಈ ಬಾರಿ ನಿಮಗೆ ಈ ಅವಕಾಶ ಸಿಕ್ಕಿದೆ. ಪ್ರತಿಪಕ್ಷಗಳಿಗೆ ಸ್ಕೋಪ್ ಇರುವುದಿಲ್ಲ. ಮೋದಿ ಆಡಳಿತದಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಲಿದೆ ಎಂದರು.

ಅದರಲ್ಲೂ ಬಿಹಾರದಲ್ಲಿ ಎಲ್ಲ ಕಾಮಗಾರಿ ಮುಗಿದಿದೆ. ಉಳಿದವುಗಳನ್ನು ಕೂಡ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು, ಆದ್ದರಿಂದ ನಾವು ಸಂಪೂರ್ಣವಾಗಿ ಒಟ್ಟಿಗೆ ಇದ್ದೇವೆ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದರು. ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಆದಷ್ಟು ಬೇಗ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಮೋದಿಗೆ ನಿತೀಶ್ ಕುಮಾರ್ ಭರವಸೆ ನೀಡಿದರು.

Advertisement
Tags :
Advertisement