For the best experience, open
https://m.suddione.com
on your mobile browser.
Advertisement

ಲೋಕಸಭಾ ಚುನಾವಣೆ ಮುಗಿದಿದೆ.. ಸಿದ್ದರಾಮಯ್ಯ ಸರ್ಕಾರ ಬೀಳುತ್ತಾ..? ಕೋಡಿಮಠದ ಶ್ರೀಗಳು ಹೇಳಿದ್ದೇನು..?

11:23 AM Jun 19, 2024 IST | suddionenews
ಲೋಕಸಭಾ ಚುನಾವಣೆ ಮುಗಿದಿದೆ   ಸಿದ್ದರಾಮಯ್ಯ ಸರ್ಕಾರ ಬೀಳುತ್ತಾ    ಕೋಡಿಮಠದ ಶ್ರೀಗಳು ಹೇಳಿದ್ದೇನು
Advertisement

ಕೋಡಿಮಠದ ಶ್ರೀ ಶಿವಯೋಗಿ ಶಿವಾನಂದ ಸ್ವಾಮೀಜಿ ಹೇಳಿರುವ ಭವಿಷ್ಯ ಸಾಕಷ್ಟು ನಿಜವಾಗಿದೆ. ಪ್ರಕೃತಿ ವಕೋಪಗಳ ಬಗ್ಗೆ, ರಾಜಕೀಯದ ಬಗ್ಗೆಯೂ ಸಾಕಷ್ಟು ಭವಿಷ್ಯ ನುಡಿಯುತ್ತಾರೆ. ಅದೆಲ್ಲವೂ ನಿಜ ಕೂಡ ಆಗಿದೆ. ಇದೀಗ ಸಿದ್ದರಾಮಯ್ಯ ಸರ್ಕಾರದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ.

Advertisement

ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯ ಬಳಿಕ ಖಂಡಿತ ಕಾಂಗ್ರೆಸ್ ಪಕ್ಷ ಬೀಳಲಿದೆ ಎಂಬ ಮಾತನ್ನೇ ಆಡುತ್ತಿದ್ದರು. ಇದೀಗ ಲೋಕಸಭಾ ಚುನಾವಣೆಯೂ ಮುಗಿದಿದೆ. ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಕೋಡಿ ಮಠದ ಶ್ರೀಗಳು ಒಳ್ಳೆಯ ಭವಿಷ್ಯವನ್ನೇ ನುಡಿದಿದ್ದಾರೆ. 'ಗುರುಗಳು ಶಿಷ್ಯರಾಗುತ್ತಾರೆ. ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಪೋಟಕ ಭವಿಷ್ಯ ನುಡಿಯುತ್ತೇನೆ. ದೇಶದಲ್ಲಿ ಕ್ರೋಧಿ ನಾಮ ಸಂವತ್ಸರವಿದೆ. ಶುಭಗಳಿಗೆಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ವಾಯುಕಂಟಕ, ಅಗ್ನಿಕಂಟಕಗಳೇ ಹೆಚ್ಚಾಗಲಿವೆ. ರಾಜ್ಯದಲ್ಲಿ ಈ ಬಾರಿ ಅತಿವೃಷ್ಠಿ ಸಾಧ್ಯತೆ ಇದೆ' ಎಂದಿದ್ದಾರೆ.

Advertisement

ಕೇಂದ್ರ ಸರ್ಕಾರ ಭವಿಷ್ಯವನ್ನು ಶ್ರಾವಣದಲ್ಲಿ ಹೇಳುತ್ತಾರೆ ಎನ್ನಲಾಗಿದೆ. ಎನ್‌ಡಿಎ ಸರಳ ಮತಗಳ ಮೂಲಕ ತಮ್ಮ‌ ಸರ್ಕಾರವನ್ನು ಸ್ಥಾಪಿಸಿದೆ. ಕೇಂದ್ರ ಸರ್ಕಾರ ಹಾಗೂ ಮೋದಿ ಬಗ್ಗೆ ಶ್ರಾವಣದಲ್ಲಿ ಭವಿಷ್ಯ ನುಡಿಯುತ್ತೇನೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಭವಿಷ್ಯ ಕೇಳಲು ಎಲ್ಲರೂ ಉತ್ಸುಕರಾಗಿದ್ದಾರೆ. ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯ ಸತ್ಯವಾಗುವ ಕಾರಣ, ಶ್ರಾವಣದಲ್ಲಿ ಯಾವ ರೀತಿಯ ಭವಿಷ್ಯವನ್ನು ಹೇಳಬಹುದು ಎಂಬ ಕುತೂಹಲವಿದೆ. ಇನ್ನು ರಾಜ್ಯ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸೇಫ್ ಎಂಬುದನ್ನು ತಿಳಿಸಿದ್ದಾರೆ‌.

Advertisement

Advertisement
Advertisement
Advertisement
Tags :
Advertisement