Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜೆಟ್ ಲ್ಯಾಗ್ ಪ್ರಕರಣ: ಮಧ್ಯರಾತ್ರಿ ಪಬ್ ನಲ್ಲಿ ಇದ್ದಿದ್ದು ನಿಜ.. ಆದರೆ : ನಟ ದರ್ಶನ್ ಹೇಳಿದ್ದೇನು..?

08:06 PM Jan 12, 2024 IST | suddionenews
Advertisement

ಇತ್ತಿಚೆಗೆ ಜೆಟ್ ಲ್ಯಾಗ್ ಪಬ್ ನಲ್ಲಿ ನಿಯಮ ಮೀರಿ ಮಧ್ಯರಾತ್ರಿ ತನಕ ಪಾರ್ಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಚಿಕ್ಕಣ್ಣ, ಪ್ರಜ್ವಲ್ ಸೇರಿದಂತೆ ಹಲವರಿಗೆ ಪೊಲೀಸರು ನೋಟೀಸ್ ನೀಡಿದ್ದರು. ದರ್ಶನ್ ದುಬೈನಲ್ಲಿದ್ದ ಕಾರಣ ವಿಚಾರಣೆಗೆ ಹಾಜರಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಇಂದು ದರ್ಶನ್ ವಿಚಾರಣೆಗೆ ಹಾಜರಾಗಿದ್ದಾರೆ. ಅಂದಿನ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

'ಪಬ್ ನಲ್ಲಿ 1 ಗಂಟೆಯವರೆಗೂ ಇದ್ದಿದ್ದು ನಿಜ. ಅಂದು ಕಾಟೇರ ಸಕ್ಸಸ್ ಇತ್ತು. ಪಾರ್ಟಿ ಮಾಡಿದ್ದು ನಿಜ. ನಾನು ನನ್ನ ಸ್ನೇಹಿತರು ಹೋಗಿದ್ದೆವು. ಊಟ ಖಾಲಿಯಾಗಿತ್ತು. ಜೆಟ್ ಲ್ಯಾಗ್ ಮಾಲೀಕರು ಊಟ ತರಿಸಿಕೊಡುತ್ತೀವಿ ಅಂತ ಹೇಳಿದ್ದರು. ಒಂದು ಗಂಟೆಯಲ್ಲಿ ಊಟ ಮಾಡಿದ್ದೆವೆ ವಿನಃ, ಪಾರ್ಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕಾಟೇರ ಸಿನಿಮಾ ರಿಲೀಸ್ ಆಗಿ ಧೂಳೆಬ್ಬಿಸುತ್ತಾ ಇದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ. ನೂರು ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಇನ್ನು ಕೂಡ ಮುನ್ನುಗ್ಗುತ್ತಾ ಇದೆ. ಬಾಕ್ಸ್ ಆಫೀಸ್ ಸುಲ್ತಾನನ ಖಾತೆಗೆ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಸೇರಿಕೊಂಡಿದೆ. ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡಿದ ಖುಷಿಗೆ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಮಾಧ್ಯಮದವರ ಜೊತೆಗೆ ಮಾತನಾಡಿದ ಬಳಿಕ, ದರ್ಶನ್ ಹಾಗೂ ಸ್ನೇಹಿತರು ಜೆಟ್ ಲ್ಯಾಗ್ ನಲ್ಲೂ ಪಾರ್ಟಿ ಮಾಡಿದ್ದರು. ಮಧ್ಯರಾತ್ರಿ ತನಕ ಪಾರ್ಟಿ ಮಾಡಿದ್ದಾರೆಂದು ಪೊಲೀಸರು ನೋಟೀಸ್ ಜಾರಿ ಮಾಡಿದ್ದರು.

Advertisement

Advertisement
Tags :
actor DarshanbangaloreJet lag casepub at midnightಜೆಟ್ ಲ್ಯಾಗ್ ಪ್ರಕರಣಪಬ್ ನಟ ದರ್ಶನ್ಬೆಂಗಳೂರು
Advertisement
Next Article