Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಏನೇ ಎದುರಾದರೂ ಕುಗ್ಗಬೇಡ ಎಂದು ರಿಷಭ್ ಶೆಟ್ಟಿಗೆ ಅಭಯ ನೀಡಿದ ದೈವ

02:14 PM Jan 06, 2024 IST | suddionenews
Advertisement

ಮಂಗಳೂರು: ತುಳುನಾಡಿನ ದೈವಗಳ ವಿಚಾರವನ್ನಿಟ್ಟುಕೊಂಡು ಮಾಡಿದ್ದ ಕಾಂತಾರ ಸಿನಿಮಾ ದೇಶ-ವಿದೇಶದಲ್ಲೂ ಸದ್ದು ಮಾಡಿತ್ತು. ರಿಷಭ್ ಶೆಟ್ಟಿ ಅವರ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು. ಕಾಂತಾರ ಸಿನಿಮಾದಿಂದ ಹಲವು ಅವಾರ್ಡ್ ಗಳು ಕೂಡ ರಿಷಭ್ ಶೆಟ್ಟಿ ಅವರ ಹೆಗಲು ಸೇರಿದವು. ಇದೀಗ ಕಾಂತಾರ ಸಿನಿಮಾದ ಪ್ರಿಕ್ವೇಲ್ ಗೆ ದೈವಗಳ ಆಶೀರ್ವಾದ ಸಿಕ್ಕಿದೆ.

Advertisement

ಇಂದು ರಿಷಭ್ ಶೆಟ್ಟಿ, ಮಂಗಳೂರಿನ ವಜ್ರದೇಹಿ ಮಠಕ್ಕೆ ಭೇಟಿ ನೀಡಿದ್ದರು‌. ಈ ವೇಳೆ ಕಾಂತಾರಾ ಮೊದಲ ಅಧ್ಯಾಯಕ್ಕೆ ದೈವದಿಂದ ಅಭಯ ಸಿಕ್ಕಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮೂಲಕ ಸೂಚನೆ ನೀಡಿದೆ. ಏನೇ ಎದುರಾದರೂ ಕುಗ್ಗಬೇಡ ಎಂದು ತಿಳಿಸಿದೆ. ದೈವದ ಆಶೀರ್ವಾದ ಸಿಕ್ಕಿದ್ದಕ್ಕೆ ರಿಷಭ್ ಶೆಟ್ಟಿ ಅಂಡ್ ಟೀಂ ಫುಲ್ ಖುಷಿಯಾಗಿದ್ದಾರೆ. ಇನ್ನು ಕಾಂತಾರ ಸಿನಿಮಾ ಮಾಡುವುದಕ್ಕೂ ಮುನ್ನವೂ ದೈವದ ಅನುಮತಿ ಪಡೆದಿದ್ದರು.

ರಿಷಭ್ ಶೆಟ್ಟಿ ಅವರು ಈ ಹಿಂದೆ ವಜ್ರದೇಹಿ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ಅವರು ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಇಚ್ಛೆಯನ್ನು ಹೇಳಿಕೊಂಡಿದ್ದರು. ಹೀಗಾಗಿ ಕೋಲಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ಆಹ್ವಾನಿಸಿದ್ದರು. ಹೀಗಾಗಿ ರಿಷಬ್ ಇದರಲ್ಲಿ ಭಾಗಿ ಆಗಿದ್ದಾರೆ. ಸಿನಿಮಾ ರಿಲೀಸ್ ಆದ ಮೇಲೆ ಕೋಟಿ ಕೋಟಿ ಹಣವನ್ನು ಬಾಚಿಕೊಂಡಿದೆ. ಕಾಂತಾರ ಮುಂದುವರೆದ ಭಾಗವನ್ನು ನೋಡಬೇಕೆಂಬ ಆಸೆಯನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದರು. ಹೀಗಾಗಿ ಅದರ ಹಿಂದಿನ ಭಾಗವನ್ನು ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಸಿನಿಮಾ ಪ್ರಿಕ್ವೇಲ್ ಶೂಟ್ ಆಗುತ್ತಿರುವುದು.

Advertisement

Advertisement
Tags :
actor rishab shettybangaloreMangaloreಏನೇ ಎದುರಾದರೂ ಕುಗ್ಗಬೇಡಬೆಂಗಳೂರುಮಂಗಳೂರುರಿಷಭ್ ಶೆಟ್ಟಿ
Advertisement
Next Article