Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಧಿಕಾರ ಇಲ್ಲ ಅಂತ ಕುಮಾರಸ್ವಾಮಿ ಹೀಗೆ ಆಡುವುದು ಶೋಭೆ ತರಲ್ಲ : ದಿನೇಶ್ ಗುಂಡೂರಾವ್

01:41 PM Dec 11, 2023 IST | suddionenews
Advertisement

 ಪ್ರಭಾವಿ ಸಚಿವರೊಬ್ಬರು ಬಿಜೆಪಿಯ ಕದ ತಟ್ಟಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರ ಇಲ್ಲ ಅಂತ ಈ ರೀತಿ ಆಡುವುದು, ಅವರಿಗೇನೆ ಶೋಭೆ ತರಲ್ಲ ಎಂದಿದ್ದಾರೆ.

Advertisement

ಸುವರ್ಣಸೌಧದ ಬಳಿ ಈ ಬಗ್ಗೆ ಮಾತನಾಡಿದ್ದು, ಜೆಡಿಎಸ್ ಪಕ್ಷವನ್ನು ಜನ ಹೀನಾಯವಾಗಿ ಸೋಲಿಸಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದು, ಗೌರವಯುತವಾಗಿ ಜನರ ಸೇವೆ ಮಾಡಬೇಕು. ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರ ಇಲ್ಲದೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ರೀತಿ ವರ್ತಿಸುವುದು ಸರಿಯಲ್ಲ. ಸರ್ಕಾರ ಪತನ ಮಾಡಬೇಕು ಎಂಬುದು ಅವರ ರಾಜಕಾರಣವಾದರೇ ಏನು ಹೇಳಬೇಕು. ಕಳೆದ ಚುನಾವಣೆಯಲ್ಲಿ ಏನಾಯಿತು ಎಂದು ತಿಳಿದುಕೊಂಡು ಹೆಜ್ಜೆ ಇಡಲಿ. ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ. ಜನರ ತೀರ್ಪು ಗೌರವಿಸಿ ಮುಂದೆ ನಡೆಯಬೇಕು ಎಂದಿದ್ದಾರೆ.

ವಿರೋಧ ಪಕ್ಷದ ಜವಬ್ದಾರಿಯನ್ನು ಅವರು ನಿಭಾಯಿಸಲಿ. ಯಾವುದೇ ಪಕ್ಷವಾದರೂ ಅದರಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇರಲಿವೆ. ಅದಕ್ಕೆ ಕಾದು, ಸರ್ಕಾರವನ್ನು ಬೀಳಿಸುವ ಉದ್ದೇಶದಿಂದ ಕಾದು ಕುಳಿತರೆ ಅದು ರಾಜಕಾರಣ ಅಷ್ಟೇನಾ..? ವಿರೋಧ ಪಕ್ಷದ ಜವಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲಿ. ಅದನ್ನು ಬಿಟ್ಟು ಈ ರೀತಿಯಾಗಿ ಮಾಡುವುದು ಪ್ರಜಾಪ್ರಭುತ್ವಕ್ಕೇ ಶೋಭೆ ತರುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರು ಕಲ್ಲಡ್ಕ ಪ್ರಭಾಕರ್ ಅವರನ್ನು ಹೊಗಳಿದ ವಿಚಾರಕ್ಕೆ ಮಾತನಾಡಿ, ಅದು ಅವರ ವೈಯಕ್ತಿಕ ರಾಜಕಾರಣ. ಅನಿವಾರ್ಯವಾಗಿರಬಹುದು. ಶಕ್ತಿ ಕಡಿಮೆಯಾಗಿದೆ. ಹೆಚ್ಚು ಮಾಡಿಕೊಳ್ಳಲು ಈ ರೀತಿ ಹೇಳಿಕೆ ನೀಡಿರಬಹುದು ಎಂದಿದ್ದಾರೆ.

Advertisement

Advertisement
Tags :
authoritybelagaviDinesh GunduraofeaturedKumaraswamysuddioneಅಧಿಕಾರ ಇಲ್ಲ ಅಂತ ಕುಮಾರಸ್ವಾಮಿದಿನೇಶ್‌ ಗುಂಡೂರಾವ್‌ಬೆಳಗಾವಿಸುದ್ದಿಒನ್
Advertisement
Next Article