Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದೂರುಗಳಿರುವ ಚೈತ್ರಾ ಬಿಗ್ ಬಾಸ್ ಮನೆಯಲ್ಲಿರುವುದು ಒಳ್ಳೆಯದಲ್ಲ : ಹೊರ ಹಾಕಲು ಹೇಳಿದ ವಕೀಲ..!

10:21 AM Oct 04, 2024 IST | suddionenews
Advertisement

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್. ಈ ಬಾರಿಯ ಸೀಸನ್ 11‌ಶುರುವಾಗಿದೆ. 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಜೈಲು ದರ್ಶನ ಮಾಡಿ ಬಂದ ಚೈತ್ರಾ ಕುಂದಾಪುರ ಕೂಡ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಿಂದ ಮೊದಲು ಅವರನ್ನ ಹೊರ ಹಾಕುವಂತೆ ವಕೀಲರೊಬ್ಬರು ತಿಳಿಸಿದ್ದಾರೆ.

Advertisement

ಚೈತ್ರಾ ಅವರನ್ನ ತಕ್ಷಣವೇ ಬಿಗ್ ಬಾಸ್ ಶೋನಿಂದ ಹೊರಗೆ ಹಾಕಬೇಕು. ಇಲ್ಲವಾದಲ್ಲಿ ಕಲರ್ಸ್ ಕನ್ನಡದ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಕ್ರಮ ಕೈಗೊಳ್ಳಲಾಗುವುದು ವಕೀಲ ಕೆ.ಎಲ್. ಭೋಜರಾಜ್ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಹೋಸ್ಟ್ ಮಾಡುತ್ತಿರುವ ರಿಯಾಲಿಟಿ ಶೋ ಅತ್ಯಂತ ಜನಪ್ರಿಯವಾಗಿದೆ. ಆದರೆ ಅದರಲ್ಲಿ14ನೇ ಸ್ಪರ್ಧಿಯಾಗಿ ಆಯ್ಕೆಯಾಗಿರುವ ಚೈತ್ರಾ ಕುಂದಾಪುರ ಮೇಲೆ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿವೆ. ಕೇಸ್ ಗಳು ಇರುವ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಇರಬಾರದು. ಹೀಗಾಗಿ ತಕ್ಷಣವೇ ಅವರನ್ನು ಹೊರ ಹಾಕಿ ಎಂದಿದ್ದಾರೆ. ಒಂದು ವೇಳೆ ಹೊರ ಹಾಕದೆ ಹೋದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಸದ್ಯ ನರಕವಾಸಿಗಳಾಗಿದ್ದಾರೆ. ಕೆಲಸ ಮಾಡುವುದಕ್ಕೆಂದು ಕರೆದ ಸ್ವರ್ಗವಾಸಿಗಳ ಮೇಲೆಯೇ ದಿಡ್ಡ ರಂಪಾಟ‌ ಮಾಡಿದ್ದರು. ಶನಿವಾರ ಹಾಗೂ ಭಾನುವಾರ ಸುದೀಪ್ ಪಂಚಾಯ್ತಿ ಶುರುವಾಗಲಿದ್ದು, ಮೊದಲ ವಾರವೇ ಯಾರಿಗೆಲ್ಲಾ ಕ್ಲಾಸ್ ಸಿಗಲಿದೆ, ಅದರಲ್ಲೂ ಚೈತ್ರಾ ಕುಂದಾಪುರಗೆ ಸುದೀಪ್ ಯಾವ ರೀತಿ ಬುದ್ದಿ ಹೇಳುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕೂಡ ಕಾಯುತ್ತಿದ್ದಾರೆ.

Advertisement

Advertisement
Tags :
bengaluruBigg boss kannadaChaitra Kundapurchitradurgasuddionesuddione newsಚಿತ್ರದುರ್ಗಚೈತ್ರಾಚೈತ್ರಾ ಕುಂದಾಪುರಬಿಗ್ ಬಾಸ್ಬೆಂಗಳೂರುವಕೀಲ ಜಗದೀಶ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article