For the best experience, open
https://m.suddione.com
on your mobile browser.
Advertisement

ಉಪಪ್ರಧಾನಿ ಆಫರ್ ನೀಡಿದ ಇಂಡಿಯಾ ಒಕ್ಕೂಟ : ಜೆಡಿಯು ಸ್ಪಷ್ಟನೆ

04:11 PM Jun 04, 2024 IST | suddionenews
ಉಪಪ್ರಧಾನಿ ಆಫರ್ ನೀಡಿದ ಇಂಡಿಯಾ ಒಕ್ಕೂಟ   ಜೆಡಿಯು ಸ್ಪಷ್ಟನೆ
Advertisement

Advertisement

ಸುದ್ದಿಒನ್ : ಲೋಕಸಭೆ ಚುನಾವಣೆ ಫಲಿತಾಂಶ ನಿಧಾನವಾಗಿ ಹೊರಬೀಳುತ್ತಿದೆ. ಈ ಸಮಯದಲ್ಲಿ ಎನ್‌ಡಿಎ ಮುಂದಿದೆ. ಆದರೆ ಇಂಡಿಯಾ ಒಕ್ಕೂಟ ಕೂಡ ಚುನಾವಣೆಯಲ್ಲಿ ಮೊದಲಿಗಿಂತ ಉತ್ತಮವಾಗಿದೆ. ಎನ್‌ಡಿಎ 300 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜೆಡಿಯುಗೆ ಸೇರಿದ 14 ಸ್ಥಾನಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಜೆಡಿಯು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಏತನ್ಮಧ್ಯೆ, ವಿಶ್ವಾಸಾರ್ಹ ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರನ್ನು ಉಪಪ್ರಧಾನಿ ಮಾಡುವ ಪ್ರಸ್ತಾಪವನ್ನು ಇಂಡಿಯಾ ಒಕ್ಕೂಟ ನೀಡಿದೆ. ಈ ವಿಚಾರವಾಗಿ ಶರದ್ ಪವಾರ್ ಕೂಡ ನಿತೀಶ್ ಕುಮಾರ್ ಜೊತೆಗೆ ಈಗಾಗಲೇ ಮಾತನಾಡಿದ್ದಾರೆ. ಆದರೆ ಜೆಡಿಯು ಮಾತ್ರ ಎನ್‌ಡಿಎ ಭಾಗವಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಆರಂಭದಲ್ಲಿ ಮಹಾಮೈತ್ರಿಕೂಟ ರಚನೆಯಲ್ಲಿ ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಅನೇಕ ಸಭೆಗಳನ್ನು ನಡೆಸಿದ್ದರು. ಆದರೆ ನಂತರ ಅವರು ಅನಿರೀಕ್ಷಿತವಾಗಿ ಮಹಾಮೈತ್ರಿಕೂಟವನ್ನು ತೊರೆದು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದರು. ಅಷ್ಟೇ ಅಲ್ಲ ಮಹಾಮೈತ್ರಿಕೂಟದಿಂದ ಹಿಂದೆ ಸರಿದ ನಿತೀಶ್ ಕುಮಾರ್ ಬಿಜೆಪಿ ಜತೆ ಕೈಜೋಡಿಸಿ ಎನ್ ಡಿಎ ಪಾಲಾಗಿದ್ದರು. ಆದರೆ ನಿತೀಶ್ ಕುಮಾರ್ ಮಹಾಮೈತ್ರಿಕೂಟಕ್ಕೆ ಹೋಗುತ್ತಾರೆಂಬ ವಿಚಾರಕ್ಕೆ ಜೆಡಿಯು ಸ್ಪಷ್ಟನೆ ನೀಡಿದೆ.

Advertisement

ನಾವು ನಮ್ಮ ಹಿಂದಿನ ನಿಲುವನ್ನು ಮುಂದುವರಿಸುತ್ತೇವೆ. ನಿತೀಶ್ ಕುಮಾರ್ ನೇತೃತ್ವದಲ್ಲಿ ಜೆಡಿಯು ಮತ್ತೊಮ್ಮೆ ಎನ್‌ಡಿಎಗೆ ತನ್ನ ಬೆಂಬಲವನ್ನು ನೀಡಲಿದೆ. ನಾವು ಎನ್‌ಡಿಎ ಜೊತೆಗಿದ್ದೇವೆ, ನಾವು ಎನ್‌ಡಿಎಯೊಂದಿಗೆ ಮುಂದುವರಿಯುತ್ತೇವೆ ಎಂದು ಜೆಡಿಯು ವಕ್ತಾರ ಕೆಸಿ ತ್ಯಾಗಿ ಸ್ಪಷ್ಟಪಡಿಸಿದ್ದಾರೆ. “ನಾವು ಎನ್‌ಡಿಎ ಜೊತೆ ಇರಲಿದ್ದೇವೆ, ಸಮ್ಮಿಶ್ರ ಎಂದರೆ ಏನು ಎಂದು ನಿತೀಶ್ ಕುಮಾರ್‌ಗೆ ಅರ್ಥವಾಗಿದೆ. ಪ್ರತಿಪಕ್ಷಗಳು ನಿತೀಶ್ ಕುಮಾರ್ ಅವರನ್ನು ಕಡಿಮೆ ಅಂದಾಜು ಮಾಡಿದೆ ಎಂದು ಜೆಡಿಯು ನಾಯಕ ನೀರಜ್ ಕುಮಾರ್ ಹೇಳಿದ್ದಾರೆ. “ನಮ್ಮ ನಾಯಕ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅವರ ಕ್ರಮವನ್ನು ಅನುಸರಿಸುತ್ತೇವೆ ಮತ್ತು ಗೌರವಿಸುತ್ತೇವೆ. ನಿತೀಶ್ ಕುಮಾರ್ ಯಾವಾಗಲೂ ಬಿಹಾರದ ಜನರಿಗಾಗಿ ಯೋಚಿಸುತ್ತಾರೆ ಮತ್ತು ಅವರ ನಿರ್ಧಾರವು ಸರ್ವೋಚ್ಚವಾದದ್ದು ಎಂದು ಅವರು ಹೇಳಿದರು.

Advertisement

ಸದ್ಯದ ಪ್ರಕಾರ, ಸ್ಪರ್ಧಿಸಿರುವ 16 ಸ್ಥಾನಗಳಲ್ಲಿ 14 ರಲ್ಲಿ ಜೆಡಿಯು ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂದಿದೆ. 17 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಮತ್ತೊಂದು ಮಿತ್ರ ಪಕ್ಷ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಹಾಜಿಪುರ ಸೇರಿದಂತೆ ಎಲ್ಲಾ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಇದಕ್ಕೂ ಮುನ್ನ, ದೆಹಲಿ ಪ್ರವಾಸದಲ್ಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಪಾಟ್ನಾಗೆ ತೆರಳುವ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕೂಡ ಭೇಟಿ ಮಾಡಿದ್ದಾರೆ.

Advertisement
Tags :
Advertisement