Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾವೂ ಬೆಂಗಳೂರು ಬಿಟ್ಟರೆ ಖಾಲಿ.. ಖಾಲಿ.. ನಮ್ಮ ಬಗ್ಗೆ ಯೋಚನೆ ಮಾಡಿ ಮಾತಾಡಿ : ಕನ್ನಡಿಗರನ್ನು ಕೆರಳಿಸಿದ ಹೊರ ರಾಜ್ಯದ ಯುವತಿ..!

02:34 PM Sep 21, 2024 IST | suddionenews
Advertisement

ಬೆಂಗಳೂರು: ಕರ್ನಾಟಕಕ್ಕೆ ಬಂದು ತಮ್ಮದೇ ಪಾರುಪತ್ಯ ಸಾಧಿಸುವ ಹೊರರಾಜ್ಯದವರು ಆಗಾಗ ನಾಲಿಗೆ ಹರಿ ಬಿಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಆಟೋ ಡ್ರೈವರ್ ವಿಚಾರದಲ್ಲಿ ಒಂದು ಘಟನೆ ನಡೆದಿದೆ. ಓಲಾ ಬುಕ್ಕಿಂಗ್ ಮಾಡಿ, ಕ್ಯಾನ್ಸಲ್ ಮಾಡಿದ ಕಾರಣಕ್ಕೆ ಹುಡುಗಿ ಜೊತೆಗೆ ಆಟೋ ಡ್ರೈವರ್ ಜಗಳ ಮಾಡಿದ್ದ ಎಂಬ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮಕ್ಕೂ ಒತ್ತಾಯಿಸಿದರು. ಬೆಂಗಳೂರು ಪೊಲೀಸರು ಆಕ್ಷನ್ ತೆಗೆದುಕೊಂಡಿದ್ದಾರೆ. ಬಳಿಕ ಡ್ರೈವರ್ ಕೂಡ ನಾನು ಏನು ಮಾಡಿಲ್ಲ ಎಂಬ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಆದರೆ ಈಗ ಇದೇ ವಿಚಾರವನ್ನು ಹೊರರಾಜ್ಯದ ಯುವತಿಯರು ನಾಲಿಗೆ ಹರಿಬಿಡುತ್ತಿದ್ದಾರೆ.

Advertisement

ಉತ್ತರ ಭಾರತದ ಯುವತಿಯೊಬ್ಬಳು ಈ ವಿಚಾರ ಸಂಬಂಧ ಈಗಾಗಲೇ ನಾಲಿಗೆ ಹರಿಬಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಬ್ಬ ಹೊರ ರಾಜ್ಯದ ಯುವತಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆ ಯುವತಿಯ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಉತ್ತರ ಭಾರತೀಯ ಮೂಲದ ಯುವತಿ ಸುಗಂಧ ಶರ್ಮಾ ಎಂಬಾಕೆ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.

https://www.instagram.com/reel/DAGSldPS4pj/?igsh=MWhrcTZkcW9nYXh3Ng==

Advertisement

ಉತ್ತರ ಭಾರತದವರಾದ ನಾವೂ ಬೆಂಗಳೂರನ್ನು ಬಿಟ್ಟು ಹೋದ್ರೆ ನಿಮ್ಮ ಸಿಟಿ ಫುಲ್ ಖಾಲಿ ಆಗುತ್ತದೆ. ಇದಕ್ಕೂ ಮೊದಲು ಬೆಂಗಳೂರಿನ ಪಿಜಿಗಳು ಫುಲ್ ಖಾಲಿ ಆಗುತ್ತವೆ. ಕೋರಮಂಗಲ ಕ್ಲಬ್ ಗಳು ಖಾಲಿಯಾಗುತ್ತವೆ ಕಣ್ರೋ. ಕ್ಲಬ್ ಗಳಲ್ಲಿ ಡ್ಯಾನ್ಸ್ ಮಾಡಲು ಹುಡುಗಿಯರೇ ಇರುವುದಿಲ್ಲ. ಯೋಚನೆ ಮಾಡಿ ನಮ್ಮ ಬಗ್ಗೆ ಮಾತನಾಡಿ ಎಂದು ಹೇಳಿರುವ ವಿಡಿಯೋಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಈ ಯುವತಿಯ ವಿರುದ್ಧ ಕನ್ನಡದ ನಟ-ನಟಿಯರು ಕೆಂಡಕಾರಿದ್ದು, ಮೊದಲು ಆ ಯುವತಿಗೆ ರಾಜ್ಯದಿಂದ ಹೊರಗೆ ಹೋಗಲು ಹೇಳಿ ಎನ್ನುವ ಮಾತು ಶುರುವಾಗಿದೆ.

Advertisement
Tags :
another statebengaluruchitradurgaKannadigasleave Bangaloresuddionesuddione newsYoung womanಕನ್ನಡಿಗರುಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹೊರ ರಾಜ್ಯದ ಯುವತಿ
Advertisement
Next Article