Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮುಸ್ಲಿಮರ ಜೊತೆಗೆ ನಿಲ್ಲುತ್ತೇನೆ ಅನ್ನೋದಲ್ಲ.. ಸಿದ್ದರಾಮಯ್ಯ ಮುಸ್ಲಿಮರೇ : ಈಶ್ವರಪ್ಪ

07:12 PM Dec 13, 2023 IST | suddionenews
Advertisement

ಹುಬ್ಬಳ್ಳಿ: ಇತ್ತಿಚೆಗೆ ಮುಸ್ಲಿಮರ ಪರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌ ನೀಡಿದ್ದರು. ಆ ಹೇಳಿಕೆ ಮೇಲೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಇದೀಗ ಕೆ ಎಸ್ ಈಶ್ವರಪ್ಪ ಸಿದ್ದರಾಮಯ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರ ಜೊತೆಗೆ ನಿಲ್ಲುತ್ತೇನೆ ಅನ್ನುವುದಿಲ್ಲ, ಸಿದ್ದರಾಮಯ್ಯ ಅವರು ಮುಸ್ಲಿಮರೆ ಎಂದಿದ್ದಾರೆ.

Advertisement

 

ಡಿ ಕೆ ಶಿವಕುಮಾರ್ ಅವರು ಮುಸಲ್ಮಾನರನ್ನು ಮೈ ಬ್ರದರ್ ಎನ್ನುತ್ತಾರೆ. ಇದರ ಅರ್ಥ ಏನು..? ಮುಸ್ಲಿಮರನ್ನು ತೃಪ್ರಿ ಪಡಿಸಲು ಅವಾರು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧರಿರುತ್ತಾರೆ. ಕುಮಾರಸ್ವಾಮಿ ಅವರು ಬ್ರದರ್ ಎನ್ನುವುದು ಏನಣ್ಣ ಚೆನ್ನಾಗಿದ್ದೀವಿ ಅನ್ನುವ ಅರ್ಥದಲ್ಲಿ. ವಯಸ್ಸಾದವರನ್ನು ಬ್ರದರ್ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಸ್ವಾರ್ಥದಲ್ಲಿ ಹೀಗೆ ಕರೆಯುತ್ತಾರೆ. ರಾಷ್ಟ್ರದ್ರೋಹಿಯನ್ನು ಬ್ರದರ್ ಎನ್ನುತ್ತಾರೆ. ಎಷ್ಟರ ಮಟ್ಟಿಗೆ ಸೊಕ್ಕು ಇರಬೇಕು ಎಂದು ಕಿಡಿಕಾರಿದ್ದಾರೆ.

Advertisement

 

ಸಿದ್ದರಾಮಯ್ಯ ಅವರು ಈ ಹಿಂದೆ ಹೀಗೆ ಮಾಡಿಯೇ ಅಧಿಕಾರ ಕಳೆದುಕೊಂಡಿದ್ದರು. ಆದರೂ ಅವರಿಗೆ ಬುದ್ದಿ ಬಂದಿಲ್ಲ. ಸಿದ್ದರಾಮಯ್ಯ ಎಲ್ಲ ಸಮಾಜವನ್ನು ಮೈಮೇಲೆ ಎಳೆದುಕೊಂಡರು. ಜಾತಿ ಒಡೆದ ನಂತರ ಮುಸ್ಲಿಮರು ಮಾತ್ರ ಗತಿ ಎಂದು 10 ಸಾವಿರ ಕೋಟಿ ರೂಪಾಯಿ ಕೊಡುತ್ತೇನೆ ಎಂದಿದ್ದಾರೆ. ಅದು ಪ್ರೂವ್ ಆಗಬೇಕು,ಅದು ಅವರ ವಯಕ್ತಿಕ ವಿಚಾರ. ನಾವು ಮುಸ್ಲಿಮರ ವಿರೋಧಿ‌ ಅಲ್ಲ. ನಾವು ರಾಷ್ಟ್ರದ್ರೋಹಿ ಮುಸ್ಲಿಮರ ವಿರೋಧಿ ಎಂದು ಹೇಳುವ ಮೂಲಕ ಸಮಾವೇಶದಲ್ಲಿ ಮುಸ್ಲಿಂ ಗುರುಗಳ ಬಗ್ಗೆ ವೇದಿಕೆ ಹಂಚಿಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಶಾಸಕ ಯತ್ನಾಳ್ ಕೂಡ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.

Advertisement
Tags :
bangaloreCM SiddaramaiahhubliK s eshwarappaಈಶ್ವರಪ್ಪಬೆಂಗಳೂರುಸಿದ್ದರಾಮಯ್ಯಹುಬ್ಬಳ್ಳಿ
Advertisement
Next Article