Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಾಯುವ ತನಕ‌ ಅಮ್ಮನ ಜೊತೆಗೆ ನಿಲ್ತೀನಿ : ನಟ ದರ್ಶನ್

01:56 PM Apr 03, 2024 IST | suddionenews
Advertisement

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಸುಮಲತಾ ನಿರಾಸೆಗೊಂಡಿದ್ದಾರೆ. ಜೊತೆಗೆ ಕುಮಾರಸ್ವಾಮಿ ಅವರ ಸಂಧಾನವೂ ಫಲಪ್ರದವಾಗಿದೆ. ಹೀಗಾಗಿ ಇಂದು ಮಂಡ್ಯದಲ್ಲಿಯೇ ನಾನು ಸ್ಪರ್ಧೆಗೆ ನಿಲ್ಲಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ವೇಳೆ ದರ್ಶನ್ ಕೂಡ ಸಾಥ್ ನೀಡಿದ್ದಾರೆ.

Advertisement

ಸುಮಲತಾ ಮಾತನಾಡುವುದಕ್ಕೂ ಮುನ್ನ ಮಾತನಾಡಿದ ದರ್ಶನ್, ನನ್ನ ಸೆಲೆಬ್ರೆಟಿಗಳಿಗೆ ನಮಸ್ಕಾರ. ಹಿರಿಯರಿಗೆ ನಮಸ್ಕಾರ. ಇದೇ ಐದು ವರ್ಷಗಳ ಹಿಂದೆ ಪ್ರಚಾರಕ್ಕೆ ಬಂದಾಗ ನನಗೆ ಎಳನೀರು ಕೊಟ್ಟು ತಣ್ಣಗೆ ಮಾಡಿದ್ದೀರಿ. ಅವರಿಗೆ ನನ್ನ ಧನ್ಯವಾದಗಳು. ಆರತಿ ಬೆಳಗಿದ ತಾಯಂದಿರಿಗೂ ನನ್ನ ಧನ್ಯವಾದಗಳು. ಯಮ ಕರೆದರು ಅಮ್ಮನ ಒಂದು ಕೆಲಸ ಮುಗಿಸಿ ಬರುತ್ತೀನಿ ಎಂದು ಹೇಳುತ್ತೀನಿ. ಅವರ ಕುಟುಂಬದ ಜೊತೆಗಿನ ನನ್ನ ಬಾಂಧವ್ಯ ಅಂಥದ್ದು. ಇವತ್ತು ಕೈಗೆ ಆಪರೇಷನ್ ಇತ್ತು. ಆದರೆ ಅಮ್ಮನ ಕೆಲಸ ಇದೆ ಅಂತ ಬಂದೆ ಎಂದಿದ್ದಾರೆ.

ಅಮ್ಮ ಏನೇ ನಿರ್ಧಾರ ತೆಗೆದುಕೊಂಡರು ನಾನು ಅದಕ್ಕೆ ಬದ್ಧನಾಗಿರುತ್ತೇನೆ. ನಾನು ನನ್ನ ತಮ್ಮ ಅವರ ಮಾತನ್ನೇ ಕೇಳುತ್ತೇವೆ ಎಂದು ಸುಮಲತಾ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ನಟ ದರ್ಶನ್.

Advertisement

Advertisement
Tags :
actor Darshanbengaluruchitradurgadeathsuddionesuddione newssumalatha ammasupportಅಮ್ಮಚಿತ್ರದುರ್ಗನಟ ದರ್ಶನ್ಬೆಂಗಳೂರುಸಾಯುವ ತನಕ‌ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article