For the best experience, open
https://m.suddione.com
on your mobile browser.
Advertisement

ಕಾಂಗ್ರೆಸ್ ನಲ್ಲಿದ್ದಾಗ ಗೆಲುವು ಸಾಧಿಸಿದ್ದೆ, ಬಿಜೆಪಿಗೆ ಬಂದು 4 ಬಾರಿ ಸೋತೆ.. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ : ವಿ ಸೋಮಣ್ಣ

12:03 PM Oct 09, 2023 IST | suddionenews
ಕಾಂಗ್ರೆಸ್ ನಲ್ಲಿದ್ದಾಗ ಗೆಲುವು ಸಾಧಿಸಿದ್ದೆ  ಬಿಜೆಪಿಗೆ ಬಂದು 4 ಬಾರಿ ಸೋತೆ   ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ   ವಿ ಸೋಮಣ್ಣ
Advertisement

Advertisement
Advertisement

ಮೈಸೂರು: ಬಿಜೆಪಿಯಲ್ಲಿ ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿಲ್ಲ. ಆದ್ರೆ ಆಕಾಂಕ್ಷಿಗಳು ಮಾತ್ರ ಹಲವರಿದ್ದಾರೆ. ಇದೀಗ ವಿ ಸೋಮಣ್ಣ ಕೂಡ ತಾನೂ ಬಿಜೆಪಿಯ ಆಕಾಂಕ್ಷಿ ಎಂದು ಹೇಳಿದ್ದಾರೆ.

Advertisement

ಮೈಸೂರಿನಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಸ್ ನಲ್ಲಿ ನಾನು ಒಬ್ಬನಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಆದರೆ ಬಿಜೆಪಿಯಲ್ಲಿ ಖಾಲಿ ಇರುವ ವಿಪಕ್ಷ ನಾಯಕ ಸ್ಥಾನವಾಗಲಿ, ರಾಜ್ಯಾಧ್ಯಕ್ಷ ಸ್ಥಾನವನ್ನಾಗಲಿ ಇನ್ನು ತುಂಬುವ ಕೆಲಸಕ್ಕೆ ಮುಂದಾಗಿಲ್ಲ. ಇದೀಗ ಸೋಮಣ್ಣ ಕೂಡ ಆಕಾಂಕ್ಷಿ ಎಂದು ತಿಳಿಸಿದ್ದಾರೆ.

Advertisement
Advertisement

ಇದೇ ವೇಳೆ ವಿಧಾನಸಭೆಯಲ್ಲಿ ಸೋಲು ಕಂಡ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನಿಂದ ಗೆಲುವು ಪಡೆದಿದ್ದೆ, ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಬಾರಿ ಗೆಲುವು ಕಂಡಿದ್ದೆ. ಆದರೆ ಬಿಜೆಪಿಗೆ ಬಂದಾಗ ನಾಲ್ಕು ಬಾರಿ ಸೋಲು ಕಂಡಿದ್ದೆ. ನಾನು ಮುಂದೆ ಏನಾಗಿ ಬಿಡುತ್ತೇನೆ ಎಂಬ ಭಯದಲ್ಲಿ ಹಿತ ಶತೃಗಳು ಸೋಲಿಸಿದವು. ಅಲ್ಲಿಂದ ಬಂದಾಗ ಏನೆಲ್ಲಾ ಆಯ್ತು ಎಂಬುದನ್ನು ಹೇಳಿದ್ದೇನೆ, ಸೋತಿದ್ದೇನೆ ಅಸಮಾಧಾನ ಏನಿಲ್ಲ, ಎಲ್ಲವೂ ಸರಿ ಆಗುತ್ತೆ‌. ಈ ಸೋಲಿಗೆ ಏನು ಎಂಬುದು ಗೊತ್ತಿದೆ. ದೇವರು ಅವರಿಗೆ ಖಂಡಿತ ಶಿಕ್ಷೆ‌ ನೀಡುತ್ತಾನೆ ಎಂದಿದ್ದಾರೆ.

Advertisement
Tags :
Advertisement