Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

'ಆಂಟಿ ಪ್ರೀತ್ಸೆ'ಗೆ ಅವಕಾಶ ಕೇಳಿದ್ದೆ : ಹಳೆಯ ದಿನಗಳನ್ನು ನೆನೆದ ನಟ ದರ್ಶನ್

05:40 PM Mar 09, 2024 IST | suddionenews
Advertisement

ಚಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಖಳ ನಟನ ಮಗನಾಗಿದ್ದರು, ಇಂಡಸ್ಟ್ರಿಗೆ ಬಂದ ದಾರಿ ಸುಲಭವಾಗಿ ಏನು ಇರಲಿಲ್ಲ. ಯಾರೂ ಕರೆದು ಅವಕಾಶ ಕೊಟ್ಟಿರಲಿಲ್ಲ. ಅವರು ನಡೆದು ಬಂದ ಹಾದಿ ಎಲ್ಲರಿಗೂ ಗೊತ್ತು. ಆಗಾಗ ತಮ್ಮ ಆ ದಿನಗಳ ಬಗ್ಗೆ ದರ್ಶನ್ ನೆನೆಯುತ್ತಿರುತ್ತಾರೆ. ಇತ್ತಿಚೆಗಷ್ಟೇ ಮತ್ತೆ ಹಳೆಯ ದಿನಗಳು ಅದರಲ್ಲೂ ಅವಕಾಶಕ್ಕಾಗಿ ಅಲೆದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಆಂಟಿ ಪ್ರೀತ್ಸೆ ಸಿನಿಮಾಗೂ ಅವಕಾಶ ಕೇಳಿಕೊಂಡು ಹೊರಟಿದ್ದರ ಬಗ್ಗೆ ಮಾತನಾಡಿದ್ದಾರೆ.

Advertisement

 

ಇದೇ ವೇದಿಕೆಯಲ್ಲಿ ಕುರುಕ್ಷೇತ್ರದ 100 ದಿನಗಳ ಅವಾರ್ಡ್ ತೆಗೆದುಕೊಂಡಿದ್ದೇನೆ. ಮೊದಲ ಸಿನಿಮಾದಿಂದಾನೂ ಮುನಿರತ್ನ ಅವರನ್ನು ನೋಡುತ್ತಾ ಬಂದಿದ್ದೀನಿ. ಮುನಿರತ್ನ ಅವರು ಮಾತಿಗೆ ಬದ್ಧರಾಗಿರುತ್ತಾರೆ. ನಾವೂ ಏನನ್ನೇ ಹೇಳಿದರೂ ಅದಕ್ಕರ ಒಂದು ಪಾಯಿಂಟ್ ಹಾಕುತ್ತಾರೆ. ನಾನು ಸಾಕಷ್ಟು ನಿರ್ಮಾಪಕರನ್ನು ನೋಡಿದ್ದೇನೆ. ಮುನಿರತ್ನ ಅವರು ಹತ್ತು ಕಟ್ಟಿ ಹಾಕುವ ಕಡೆ ಒಂದು ಮುತ್ತನ್ನು ಕಟ್ಟಿ ಹಾಕುತ್ತಾರೆ‌.

Advertisement

ಅವರ ಮೊದಲ ಸಿನಿಮಾ ಆಂಟಿ ಪ್ರೀತ್ಸೆ. ವಾಸು ಆ ಸಿನಿಮಾದ ನಿರ್ದೇಶಕರು. ಗಾಂಧಿನಗರದಲ್ಲಿ ಸಂತೋಷ್ ಲಾಡ್ಜ್ ಅಂತ ಇದೆ. ಆ ಸಿನಿಮಾಗಾಗಿ ನಾನೇ ಅವಕಾಶ ಕೇಳಿಕೊಂಡು ಹೋಗಿದ್ದೆ. ನನ್ನ ಫೋಟೋ ಕೊಟ್ಟು ಬಂದಿದ್ದೆ‌. ಆ ಚಿತ್ರಕ್ಕೆ ಅದಾಗಲೇ ಎಲ್ಲಾ ಪಾತ್ರಗಳಿಗೂ ಕಲಾವಿದರ ಆಯ್ಕೆಯಾಗಿತ್ತು. ಆದರೂ ನೋಡಿ ಸರ್ ಎಂದು ಫೋಟೋ ಕೊಟ್ಟು ಬಂದಿದ್ದೆ. ಕಲಾವಿದರ ಆಯ್ಕೆಯಾಗಿರಲಿಲ್ಲ ಎಂದಿದ್ದರೆ ಆಂಟಿ ಪ್ರೀತ್ಸೆಯಲ್ಲಿ ನಾನು ನಟಿಸಬೇಕಿತ್ತು ಎಂದು ದರ್ಶನ್ ಹೇಳಿದರು. ಅದೇ ವೇದಿಕೆಯಲ್ಲಿ ಕುಳಿತಿದ್ದ ಮುನಿರತ್ನ ಅವರು, ನೀವೂ ಮಾಡದೆ ಇದ್ದದ್ದೆ ಒಳ್ಳೆಯದಾಯಿತು ಬಿಡಿ ಎಂದಿದ್ದಾರೆ.

Advertisement
Tags :
actor DarshanAunty PreetsebangaloreDarshan ThugudeepI asked for an opportunityಆಂಟಿ ಪ್ರೀತ್ಸೆನಟ ದರ್ಶನ್ಬೆಂಗಳೂರುಹಳೆಯ ದಿನ
Advertisement
Next Article